ಮಣ್ಣಲ್ಲಿ ಹುಟ್ಟಿ
ಮಣ್ಣಲ್ಲಿ ಒಂದಾಗುವ
ದೇಹದೊಂದಿಗಿನ ನಂಟು
ಆಯ್ದುಕೊಂಡ
ಮಾರ್ಗ ಹಲವು
ಸಾರ್ಥಕತೆಯ
ಹಾದಿ ಹುಡುಕಿದ
ಮಹಾತ್ಮರು
ಮಣ್ಣಿಗಾಗಿ
ತನು-ಮನ
ಧನವನ್ನೆಲ್ಲಾ
ಅರ್ಪಿಸಿದರವರು
ಅಂದು
ಆ ಅರ್ಪಣೆಯೇ
ಭಾವವೇ
ನೆಲ, ಜಲ
ನೈಸರ್ಗಿಕ
ಸಂಪತ್ತು ಎಲ್ಲವೂ
ಸವಿಯುತ್ತಿರುವ
ಜೊತೆ ಜೊತೆಯಲ್ಲಿಯೇ
ಸ್ವಾತಂತ್ರ್ಯ
ಪರಿಧಿಯೊಳಗೆ
ಬೆಚ್ಚಗಿರುವೆವು
ಇಂದು
ಬೆಚ್ಚನೆಯ
ಸವಿಯ
ಸವಿಯುತ್ತಾ
ಇಂದು
ಪ್ರಕೃತಿಯ
ಮಡಿಲಿಗೆ
ಆಧುನಿಕತೆಯೆಂಬ
ಸೋಗಿನಲ್ಲಿ
ಬೆಂಕಿಯಿಡುತಿಹೆವು
ಸ್ವಾತಂತ್ರ್ಯದ
ಪರಿಧಿಯೊಳಗಿರಬೇಕಾದ
ಮನಸ್ಸು
ಅದ ಮೀರಿ
ತನ್ನ ಸ್ವಾರ್ಥದ
ಪರಿಧಿಯೊಳಗೆ
ಬಂಧಿಯಾಗಿ
ಪ್ರಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು
ನೈಜತೆಯ
ಭಾವವಿಲ್ಲದ
ಮನಸ್ಸು
ತೋರಿಕೆಯ
ಮೋಹಕ್ಕೆ
ಒಳಗಾಗಿ
ಸಂಸ್ಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು
ನೈತಿಕತೆಯಿಲ್ಲದ
ಸ್ವಾತಂತ್ರ್ಯವೆಂಬುದಿಲ್ಲಿ
ವಿಶಾಲವಾಗಿ
ಹೆಮ್ಮರವಾಗಿ
ಬೆಳದು
ಬುನಾದಿಯನ್ನೇ
ಅಲುಗಾಡಿಸುತಿಹದು
ಇಂದು...
ಮಣ್ಣಲ್ಲಿ ಒಂದಾಗುವ
ದೇಹದೊಂದಿಗಿನ ನಂಟು
ಆಯ್ದುಕೊಂಡ
ಮಾರ್ಗ ಹಲವು
ಸಾರ್ಥಕತೆಯ
ಹಾದಿ ಹುಡುಕಿದ
ಮಹಾತ್ಮರು
ಮಣ್ಣಿಗಾಗಿ
ತನು-ಮನ
ಧನವನ್ನೆಲ್ಲಾ
ಅರ್ಪಿಸಿದರವರು
ಅಂದು
ಆ ಅರ್ಪಣೆಯೇ
ಭಾವವೇ
ನೆಲ, ಜಲ
ನೈಸರ್ಗಿಕ
ಸಂಪತ್ತು ಎಲ್ಲವೂ
ಸವಿಯುತ್ತಿರುವ
ಜೊತೆ ಜೊತೆಯಲ್ಲಿಯೇ
ಸ್ವಾತಂತ್ರ್ಯ
ಪರಿಧಿಯೊಳಗೆ
ಬೆಚ್ಚಗಿರುವೆವು
ಇಂದು
ಬೆಚ್ಚನೆಯ
ಸವಿಯ
ಸವಿಯುತ್ತಾ
ಇಂದು
ಪ್ರಕೃತಿಯ
ಮಡಿಲಿಗೆ
ಆಧುನಿಕತೆಯೆಂಬ
ಸೋಗಿನಲ್ಲಿ
ಬೆಂಕಿಯಿಡುತಿಹೆವು
ಸ್ವಾತಂತ್ರ್ಯದ
ಪರಿಧಿಯೊಳಗಿರಬೇಕಾದ
ಮನಸ್ಸು
ಅದ ಮೀರಿ
ತನ್ನ ಸ್ವಾರ್ಥದ
ಪರಿಧಿಯೊಳಗೆ
ಬಂಧಿಯಾಗಿ
ಪ್ರಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು
ನೈಜತೆಯ
ಭಾವವಿಲ್ಲದ
ಮನಸ್ಸು
ತೋರಿಕೆಯ
ಮೋಹಕ್ಕೆ
ಒಳಗಾಗಿ
ಸಂಸ್ಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು
ನೈತಿಕತೆಯಿಲ್ಲದ
ಸ್ವಾತಂತ್ರ್ಯವೆಂಬುದಿಲ್ಲಿ
ವಿಶಾಲವಾಗಿ
ಹೆಮ್ಮರವಾಗಿ
ಬೆಳದು
ಬುನಾದಿಯನ್ನೇ
ಅಲುಗಾಡಿಸುತಿಹದು
ಇಂದು...
No comments:
Post a Comment