ಅರ್ಥವಾಗದ ಮಾತುಗಳು:- ಸತ್ತಾಗ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದು? ಯಾರೇ ಸತ್ತರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರೆ ಇರುವವರೆಗೂ ಅವರ ಆತ್ಮ ನೆಮ್ಮದಿಯಿಂದ ಇರಲಿಲ್ಲವೇ? ನೆಮ್ಮದಿ ಕಂಡುಕೊಳ್ಳಲು ಬರಲಿಲ್ಲವೇ? ನೆಮ್ಮದಿ ಬದುಕು ಅವರದಾಗಿರಲಿಲ್ಲವೇ? - ಶಾಂತಿ, ನೆಮ್ಮದಿಗಳಿಲ್ಲದ ಆತ್ಮದ ಹುಟ್ಟು ಯಾಕಾಗಿ ಎನ್ನುವ ಪ್ರಶ್ನೆ ಮೂಡುವುದಿಲ್ಲವೇ? ಸಾವಿನಲ್ಲಿ ಆತ್ಮಕ್ಕೆ ಶಾಂತಿ ಸಿಗುವುದಾದರೆ ಸಾವೇ ಪರಿಹಾರವೇ? ಇವೆಲ್ಲವೂ ಗೊಂದಲದ ಗೂಡಾಗಲಿಲ್ಲವೇ... ಸಾವಿನಲ್ಲಿ ಲೀನವಾಗುವುದು ದೇಹ ಮಾತ್ರ... ಆತ್ಮಕ್ಕೆ ಸಾವು ಎನ್ನುವುದು ಗೋಚರವಾಗದ ಸತ್ಯ...!!! ಅದರರಿವು ನಮಗಾಗಬೇಕು... ಇರುವತನಕ ನೆಮ್ಮದಿಯ ಬದುಕು ನಮ್ಮದಾಗಿರಬೇಕು ಅಲ್ಲವೇ???
No comments:
Post a Comment