Tuesday, 14 August 2012

ಚೌಕಟ್ಟು

ಸೀಮಿತದಲ್ಲಿ
ಬಂಧಿತವಾಗಿಹ ಮನ
ಅದಬಿಟ್ಟು ಹೊರಬರುವ
ತವಕವಿಲ್ಲದ ಮನಕ್ಕೆ
ಪೇರಪಿಸುವ ಶಕ್ತಿಯು
ಕುಂದಿಹ ಭಾವ...
ಚೈತನ್ಯದರಿವಿನೋ
ಕೊರತೆಯೋ?
ಅದರಾಚೆಯ ಅರಿವಿನ
ಕುತೂಹಲವಿಲ್ಲದ
ಭಾವದ ಕೊರತೆಯೋ?
ತನ್ನರಿವೇ ಹೆಚ್ಚೆಂಬ ಅಹಂ
ಜಾಗೃತವಾಗಿದೆಯೋ?
ಅರಿಯದಾಗಿಹ ಮನಕ್ಕೆ
ಸೀಮಿತವನ್ನ
ಕಿತ್ತೊಗೆಯುವ
ಮನಸ್ಸು
ಏರ್ಪಡಬೇಕಾಗಿಹದಿಲ್ಲಿ..!!

No comments:

Post a Comment