ಬಾಲ್ಯದಲ್ಲಿ ಮಗುವಿನ ತಪ್ಪಿಗೆ ಕೊಡುವ ಪೆಟ್ಟು, ಯಾವುದೇ ಪರಿಣಾಮ ಬೀರುವುದಿಲ್ಲ. ಅದರ ಮನಸ್ಸು ತಪ್ಪು-ಸರಿ ವಿಚಾರ ಮಾಡುವ ಶಕ್ತಿ ಇನ್ನು ಬೆಳೆದಿರುವುದಿಲ್ಲ, ಆ ಕ್ಷಣ ಹೆತ್ತ ತಾಯಿ ಗದರಿಸಿದ್ದಕ್ಕೆ ಹೊಡೆದಿದ್ದಕ್ಕೆ, ಬೈಯಿದ್ದಕ್ಕೆ ಅಲ್ಲಿ ಜಾಗವೇ ಇರುವುದಿಲ್ಲ, ಅದನ್ನೆಲ್ಲ ಮರೆತು, ಮರುಕ್ಷಣವೇ ಮಗುವಿನ ಬಾಯಲ್ಲಿ ಬರುವ ತೊದಲು ನುಡಿಗಳು, ನೋವಿನಲ್ಲು ಸಹಜವಾದ ಕ್ರಿಯೆಯನ್ನು ವ್ಯಕ್ತಪಡಿಸಿ ಹೆತ್ತೊಡಲನ್ನು ಸೇರಿಬಿಡುತ್ತದೆ. ಮಗುವಿನ ಅಂತಃಕರಣ ಯಾವಾಗಲೂ ತಾಯಿಯನ್ನು ಬಯಸುತ್ತದೆ, ಮಗುವಿನಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಅಂತಹ ನಿರ್ಮಲವಾದ ಮನಸ್ಸು, ನಿಷ್ಕಲ್ಮಶ ತುಂಬಿದ ಭಾವ, ಆ ಮನಸ್ಸು ಯಾವಾಗಲೂ ಹೆತ್ತೊಡಲನ್ನು ಬಯಸುತ್ತದೆ. ಅಂತಹ ಸ್ಥಿತಿಯಲ್ಲಿ ತಾಯಿಯಲ್ಲಿ ಬರುವ ಕಣ್ಣೀರು ಮನದಾಳದ ನೋವನ್ನು ಬದಿಗೊತ್ತಿಬಿಡುತ್ತದೆ...!!!

No comments:
Post a Comment