Monday, 17 December 2012

ಮುಸ್ಸಂಜೆ

ಬದುಕಿನ ಮುಸ್ಸಂಜೆಯಲ್ಲಿ
ನೋವುಗಳೊಂದಿಗೆ
ಮನಸ್ಸು, ಖಿನ್ನತೆಯ
ಘಟ್ಟಕ್ಕೆ ತಲುಪಿತ್ತು
ತ್ರಾಣವಿಲ್ಲದ ಸ್ಥಿತಿಯನ್ನ
ದೇಹ ತಲುಪಿತ್ತು
ಅಂದು ಇಂತಹದೇ
ಸ್ಥಿತಿಯಲ್ಲಿದ್ದ ತನ್ನೊಡಲು
ಒಂದಿಷ್ಟು
ಅಕ್ಕರೆಯ ಬಯಸಿತ್ತು
ಅಂದು ಗಮನಿಸದ
ಭಾವ ಕಾಡುತಿತ್ತು
ನೋವಿನ ರುಚಿ
ಸವಿಯುವ ಮೊದಲು
ಸಾವು ಸಮೀಪಿಸಬಾರದೆ
ಬಯಸುತಿಹುದು ಇಂದು
ಈಗ ಎಲ್ಲರೂ ಇದ್ದರೂ
ಇಲ್ಲದಂತಿಹರು
ಅಂದು ಆಡಿದ ಆಟಕ್ಕೆ
ಇಂದು ಅದು
ಪ್ರತಿಫಲದಂತೆ
ಬೆನ್ನತಿಹುದಿಲ್ಲಿ...!!"

No comments:

Post a Comment