Monday, 17 December 2012

ಮರ್ಯಾದೆ

ವಿಚಿತ್ರ
ಆದರೂ
ಸತ್ಯ...!!
ಸುಳ್ಳು
ಬರುವಷ್ಟು
ವೇಗವಾಗಿ
ಸತ್ಯ
ಹೊರ
ಬರುವುದಿಲ್ಲ...!!!
ಸತ್ಯದಿಂದ
ಏನೋ
ಕಳೆದುಕೊಳ್ಳುವ
ಭಾವ
ಏನಿದೆ
ಕಳೆದುಕೊಳ್ಳುವುದು
ನಾ ಏನ್ನನಾದರೂ
ತಂದಿದ್ದರೇ
ತಾನೇ...!!!
ಆದರೆ, ಅಲ್ಲಿ
ಅಡಗಿದೆ
ಮಾರ್ಯಾದೆಯ
ಭಯ...!!!???

ಸುಖ-ದುಃಖ

ಮನಸ್ಸು
ವೇಗವಾಗಿ
ಓಡುತ್ತಿತ್ತು
ಯೋಚನಾಲಹರಿಗಳ
ಸರಮಾಲೆ
ಲೆಕ್ಕವಿಡಲಾರದಷ್ಟು
ಬರುತ್ತಿತ್ತು
ಕೆಲವು
ಅರ್ಥವಾಗುತ್ತಿತ್ತು
ಕೆಲವು
ಅದರರಿವು
ಬರುವಷ್ಟರಲ್ಲಿಯೇ
ಮಿಂಚಿ
ಮರೆಯಾಗುತ್ತಿತ್ತು
ಯಾಕೋ ಗೊತ್ತಿಲ್ಲ
ಗಾಢವಾದ ಲಹರಿಗಳು
ಮಾತ್ರ ಮನದ
ಮೂಲೆಯಲ್ಲಿ
ನೆಲೆಗೊಳ್ಳುತ್ತಿತ್ತು
ಗಾಢವಾಗಿ
ಉಳಿಯುವುದು ಮಾತ್ರ
ಅತಿಯಾದ ನೋವು
ಅತಿಯಾದ ಸಂತೋಷ
ಮಿಕ್ಕೆಲ್ಲವೂ
ನೆನಪಿಗೆ ಬಾರದ
ಕಸದ ಬುಟ್ಟಿಗೆ
ಸೇರುತ್ತಿದ್ದವು..!!!

ದೇವರು

ಕಷ್ಟಗಳ
ನಿವಾರಣೆಗಾಗಿ
ದೇವರ
ಕೋಣೆಯೊಳಗೆ
ದೀಪವಾ
ಹಚ್ಚಿಟ್ಟಿರುವೆ
ನಗುತ್ತಿತ್ತು
ಮನ
ನೀ ಹಚ್ಚಿಟ್ಟ
ದೀಪಕ್ಕೆ
ಕಷ್ಟಗಳ
ಪರಿಹರಿಸುವ
ಶಕ್ತಿ
ಅಡಗಿದೆಯೇ
ಎಂದು...!!

ಪ್ರಕೃತಿ

ಮೈಹಾಸಿ
ತಣ್ಣನೆಯ
ಸ್ವಚ್ಛತೆಯ
ಸವಿಗಾಳಿ
ಸವಿಯುತ್ತಾ
ಮನಸ್ಸಿನ
ಕಲ್ಮಶಗಳನ್ನೆಲ್ಲ
ಬದಿಗೊತ್ತಿ
ಹಸಿರಹೊನ್ನಸಿರಿಯ
ಮಧ್ಯೆ
ಬದುಕಿನ
ಏರಿಳಿತಗಳೆಂಬಂತೆ
ಹರಿಯುತ್ತಿರುವ
ಜಲಧಾರೆ
ನೀ ಹೊಮ್ಮಿಸುವ
ತರಂಗಗಳು
ಮನಸ್ಸಿನ
ನವಚೈತನ್ಯದತ್ತ
ಬದುಕಿನ
ಆದರ್ಶಗಳನ್ನ
ಮೆಲುಕುಹಾಕಲು
ನಿಮ್ಮ ಒಡನಾಟವೇ
ಬಲು ಆನಂದ
ನಿಮ್ಮ ವನಸಿರಿಗೆ
ಕೊಳ್ಳಿ ಇಡಲು
ಮುಂದಾಗುವ
ಮನುಕುಲಕ್ಕೆ
ನನ್ನ ಧಿಕ್ಕಾರವಿರಲಿ...!!!

ಮುಸ್ಸಂಜೆ

ಬದುಕಿನ ಮುಸ್ಸಂಜೆಯಲ್ಲಿ
ನೋವುಗಳೊಂದಿಗೆ
ಮನಸ್ಸು, ಖಿನ್ನತೆಯ
ಘಟ್ಟಕ್ಕೆ ತಲುಪಿತ್ತು
ತ್ರಾಣವಿಲ್ಲದ ಸ್ಥಿತಿಯನ್ನ
ದೇಹ ತಲುಪಿತ್ತು
ಅಂದು ಇಂತಹದೇ
ಸ್ಥಿತಿಯಲ್ಲಿದ್ದ ತನ್ನೊಡಲು
ಒಂದಿಷ್ಟು
ಅಕ್ಕರೆಯ ಬಯಸಿತ್ತು
ಅಂದು ಗಮನಿಸದ
ಭಾವ ಕಾಡುತಿತ್ತು
ನೋವಿನ ರುಚಿ
ಸವಿಯುವ ಮೊದಲು
ಸಾವು ಸಮೀಪಿಸಬಾರದೆ
ಬಯಸುತಿಹುದು ಇಂದು
ಈಗ ಎಲ್ಲರೂ ಇದ್ದರೂ
ಇಲ್ಲದಂತಿಹರು
ಅಂದು ಆಡಿದ ಆಟಕ್ಕೆ
ಇಂದು ಅದು
ಪ್ರತಿಫಲದಂತೆ
ಬೆನ್ನತಿಹುದಿಲ್ಲಿ...!!"

ತಳಮಳ

ನೀ ಇಲ್ಲದ
ಭಾವದರಿವ
ಅರಿವಾದಡೆ
ಮನ
ಒಂದಷ್ಟು
ತಳಮಳದ
ಭಾವ
ಏರ್ಪಟ್ಟಿತ್ತು
ಯಾಕೋ,
ಏನೋ
ನೀ ನನ್ನ
ಮನದಲ್ಲಿ
ಭಾವನಾತ್ಮಕ
ಸಂಬಂಧವ
ಗಟ್ಟಿಯಾಗಿ
ಬಿಟ್ಟುಹೋಗಿದೆ
ಅದು ನಿನ್ನರಿವೆಗೆ
ಬಂದಿದ್ದರೂ
ಮನಸ್ಸು,
ಒತ್ತಡದ ಸ್ಥಿತಿಗೆ
ಬಲಿಯಾಗಿ
ಎಲ್ಲವನ್ನ
ಬಿಟ್ಟುಹೋಗಿತ್ತು..!!!

ಬಾಲ್ಯ-ಯೌವನ

ಅಂದು ನಾ
ಕಳೆದ ಬಾಲ್ಯ
ಯೌವನದ
ಮಧುರತೆಯ
ಭಾವಗಳು
ಮತ್ತೆಂದೂ
ಬಾರದೆಂದು
ಅರಿವಿದ್ದಿದ್ದರೇ
ಇನ್ನೆಷ್ಟೋ
ಮಧುರತೆಯ
ಭಾವವನ್ನ
ಸವಿಯಬಹುದಿತ್ತೋ!!!???
ಆದರೆ ಇಂದು
ತನ್ನದಾಗಿಸಿಕೊಳ್ಳುವಲ್ಲಿ
ವಿಫಲವಾದ ಭಾವ
ಕಾಡುವುದು
ಅಲೆ ಅಲೆಯಾಗಿ...!!!

Monday, 10 December 2012

ಮಧುರತೆ

ಅದೇನೋ
ಗೊತ್ತಿಲ್ಲ
ಪ್ರೀತಿಯೋ
ಆಕರ್ಷಣೆಯೋ
ವ್ಯಾಮೋಹವೋ
ಅಂದು...

ಈಗ
ಅಂದು
ಫಲಿಸಲಿಲ್ಲ
ಎನ್ನುವುದಕ್ಕಿಂತ
ಆ ಮಧುರತೆಯ
ಭಾವ
ಮನದಾಳದಲ್ಲಿ
ಇನ್ನೂ
ಮಧುರವಾಗಿಟ್ಟಿರುವ
ಮನಸ್ಸು...!!

ವಿಪರ್ಯಾಸ

ತಪ್ಪೋ ಸರಿಯೋ
ಅರಿವಿಲ್ಲದಿದ್ದರೂ
ಅರಿವಾದರೂ
ಕಾರಣ ಮಾತ್ರ
ಘಟಿಸುತ್ತಲೇ
ಸಾಗುತ್ತದೆ...!!!
ತಪ್ಪು- ಸರಿಗಳ
ಪರಿಣಾಮ
ಎಲ್ಲರಿಗೂ
ತಟ್ಟುವುದು
ಮಾತ್ರ ವಿಪರ್ಯಾಸ...!!

ಸಂಬಂಧ

ಗಂಡ-ಹೆಂಡತಿ
ಗಳೆಯ-ಗೆಳತಿ
ಇನ್ನೆಷ್ಟೋ
ಸಂಬಂಧಗಳೋ
ಅರಿಯೇ
ಅಲ್ಲಿರುವ
ಒಂದನ್ನೊಂದು
ಮಧುರವಾದ
ಭಾವಗಳು,
ಭಾವನಾತ್ಮಕ
ಹೊಂದಾಣಿಕೆಗಳೋ...!!

ಕೆಲವೊಂದು
ಮನಸ್ಸಿನ
ಭಾವಗಳು
ಸ್ವಾರ್ಥರಹಿತವಾಗಿ
ಸ್ಪಂದಿಸದೆ,
ಮತ್ತೊಂದು
ಮನಸ್ಸಿನ
ಮಧುರವಾದ
ಭಾವನೆಗಳರಿಯದೆ
ದೂರಾಗಿಹದೋ

ಒಂದಷ್ಟು ಹೊತ್ತು
ಒಳಹೊಕ್ಕು
ಅರಿಯುವ
ತಾಳ್ಮೆಯಿಲ್ಲವಾಯಿತೇ
ಅಲ್ಲಿಯೂ
ಭಾವನೆಗಳಿವೆಯೆಂಬ
ಕಲ್ಪನೆಯಿಲ್ಲವಾಯಿತೇ?
ಅದನ್ನರಿಯುವ
ಮನವಿದ್ದರೂ
ನೀ ಯಾಕೀಷ್ಟು
ಸ್ವಾರ್ಥಿಯಾದೆ...??!!

Thursday, 6 December 2012

ನಿಷ್ಕಲ್ಮತೆ

ನಿಷ್ಕಲ್ಮಶವಾದ
ಮನಸ್ಸೇ
ಅಬ್ಬಾ
ನೀ ಎಷ್ಟು
ದೂರ...!!
ನಾ
ಬಯಸಿದಾಗಲೆಲ್ಲ
ನೀ,,,
ದೂರ ದೂರ...!!!

ವೃದ್ಧಾಪ್ಯ

ಓ ದೇವರೇ
ನೀ ಇದ್ದೀಯೋ
ಇಲ್ಲವೋ
ಒಂದು ಅರಿಯೇ
ಇರುವುದಾದರೇ
ಪಾಪ-ಪುಣ್ಯದ
ಲೆಕ್ಕಚಾರವ
ನಿನ್ನ ಬಳಿಯೇ
ವಿಜೃಂಭಿಸಿಕೋ
ಬದುಕಿನ
ಮುಸ್ಸಂಜೆಯಲ್ಲಿ
ಆಸರೆಯಿಲ್ಲದ
ರೋಗಿಯಾಗಿ
ಅನ್ಯರ
ಆಶ್ರಯದಲ್ಲಿ
ಆಯುಷ್ಯನ್ನ
ಕಳೆಯುವ
ಭಾಗ್ಯವಾ
ಕರುಣಿಸದಿರು...!!

ಕೊಡುಗೆ

ದೇವರು ಎಲ್ಲವನ್ನೂ
ಕೊಟ್ಟ ಎನ್ನುವವ
ಕೂಡ ನೀಡಿದ
ದೇವರಿಗೆ
ದೇವಾಲಯದಲ್ಲಿ
ದಾನಿಯೆಂಬ
ಜಾಗದಲ್ಲಿ
ತನ್ನ ಹೆಸರ
ಬಿಂಬಿಸಿಕೊಂಡ..!!

ವಿಪರ್ಯಾಸ
ನೀಡುವವ
ಯಾರೆಂಬ
ಭಾವ
ಮನದ
ಮೂಲೆಯಲ್ಲಿ
ಪ್ರಶ್ನಾರ್ಥಕವಾಗಿ
ಕಾಡುವುದು..!!!

ನಂಬಿಕೆ

ನಂಬಿಕೆ
ಹೇಗಿರಬೇಕು
ಎಂಬುದರ
ಬಗೆಗೆ
ಜಿಜ್ಞಾಸೆ
ಮನದಲ್ಲಿ
ಮೂಡಿಹುದು

ನಂಬಿ
ಕೆಟ್ಟವರಿಲ್ಲವೋ
ಎಂದೂ ಎಷ್ಟೇ
ಹೇಳಿದರೂ
ಮನದಲ್ಲಿ
ತೊಳಲಾಟದ
ಭಾವವೇರ್ಪಟ್ಟಿಹುದು

ನಂಬಿದ
ಹಲ ವ್ಯಕ್ತಿಗಳ
ಮನದಲ್ಲಿ
ಸಂಶಯವೆಂಬ
ಭೂತ
ಆವರಿಸಿದ್ದನ್ನ ಕಂಡು
ಬದುಕು
ಅಣುಕಿಸುತಿಹುದು..!!

ವರುಣ

ಅದೇಕೋ ಇಂದು
ರಾತ್ರಿಯೆಲ್ಲ
ಮೇಘದೂತನ
ಆರ್ಭಟವೇ ಆರ್ಭಟ
ಭುವಿಗೆ ಒಂದಷ್ಟು
ತಂಪನ್ನೆರೆಯುವ
ವರುಣ ಮಾತ್ರ
ಧರೆಗಿಳಿಯಲೇ ಇಲ್ಲ...!!
ರಚ್ಚೆ ಹಿಡಿದ
ಮಗುವಿನಂತೆ,
ಮುನಿಸಿಕೊಂಡ
ಮಡದಿಯಂತೆ,
ಮೇಘದೂತನ
ಸದ್ದು-ಗದ್ದಲದಲ್ಲಿ
ಕದನಕ್ಕಿಳಿದು
ಭುವಿಯೊಂದಿಗಿನ
ಮಿಲನಕ್ಕೆ
ಸ್ಪಂದಿಸಲೇ ಇಲ್ಲ...!!!

ಇತಿಮಿತಿ

ಓ ಮನಸ್ಸೆ
ಒಂದೊಂದು ಬಾರಿ
ನನ್ನಲ್ಲಿ
ಅನ್ನಿಸಿದುಂಟು
ಸಹ್ಯವೆನ್ನಿಸಿದ್ದು
ಅಸಹ್ಯ ಭಾವವಾಗಿ
ಅಸಹ್ಯವೆನಿಸಿದ್ದು
ಸಹ್ಯ ಭಾವವಾಗಿ
ಬೇರ್ಪಟ್ಟಿದ್ದುಂಟು
ಬೇಡಿಕೆಗಳ
ಮಹಾಪೂರದೊಳಗೆ
ಅತಿಯಾದರೇ
ಅಮೃತವು
ವಿಷವಾದಂತೆ
ಮಿತವಿಲ್ಲದ
ಮಾತುಕತೆ
ಮಿತವಿಲ್ಲದ
ಒಡನಾಟ
ಮಿತವಿಲ್ಲದ
ಬಯಕೆಗಳು
ಬೇಸರಿಕೆ
ತರುವ ಮುನ್ನ
ಇತಿಮಿತಿಯ
ಪರಿಧಿಯೊಳಗೆ
ಸುಖಿಯಾಗಿರಬಾರದೇ...??

ಶ್ರೀರಕ್ಷೆ

ಓ ಮನವೇ
ತನು ಮನ
ಒಳಹೊಕ್ಕು
ನೋಡಿ ಬಾ
ಕಲ್ಮಶವಿಲ್ಲದ
ಭಾವವ
ಹೊತ್ತು ತಾ
ಹೃದಯ ತುಂಬಿ
ಮನ ತುಂಬಿ
ತ್ಯಾಗದ
ಭಾವವ
ಹೊತ್ತು ತಾ
ಇದೆ ನಿನ್ನ
ಶ್ರೀರಕ್ಷೆ,
ಧ್ಯೇಯವಾಗಿರಲಿ
ಬದುಕಿನುದ್ದುಕ್ಕೂ...!!

ಆದರ್ಶ

ನಮ್ಮ ಹಿಂದೆ
ಬರದೆ ಇರುವ
ಹಣ, ಮನೆ
ಐಹಿಕ ಸುಖಗಳತ್ತ
ಅದೇನೋ ಸೆಳೆತವೋ
ಅದೇನೋ ಮೋಹವೋ
ಇರುವಷ್ಟು
ದಿನ ಮೋಜಿಗಾಗಿ
ಅದು ಬೇಕು
ಇದು ಬೇಕು
ಎನ್ನುವ ಭಾವ
ಕಾಡುವುದು..
ಇವೇ ಬದುಕಿನ
ಆಸರೆಗಳೇ
ಇವೇ ಬದುಕಿನ
ಆದರ್ಶಗಳೇ...???!!!

Tuesday, 27 November 2012

ನೆನಪು

ಜಾರಿ ಹೋದ
ಕಾಲದ
ನೆನಪು
ಅದರ
ನೆನಪಲ್ಲೇ
ಹೊಸ
ಹಾದಿಯ
ಹುಡುಕು
ಹುಡುಕುವ
ಮನಸ್ಸಿಗೆ
ಒಂದಿಷ್ಟು
ಆದರ್ಶಗಳು
ಒಂದಿಷ್ಟು
ಮೌಲ್ಯಗಳು
ಜೊತೆ
ಜೊತೆಯಲ್ಲಿ...!!!

Monday, 26 November 2012

ಅಹಂ

ಬದುಕೇ ಮಾಯೆಯೋ
ಮಾಯೆಯೇ ಬದುಕೋ
ಮಾನವ ನೋಡಲು ಒಂದೇ
ಬಗೆಯಾದರೂ
ಅಭಿರುಚಿಯಲ್ಲಿ ಭಿನ್ನ
ನಡೆತೆಯಲ್ಲಿ ಭಿನ್ನ
ಹೊಂದಾಣಿಕೆಯಲ್ಲಿಯೂ
ಭಿನ್ನವಾಗಿಹುದು...!!!

ಒಮ್ಮತವಿಲ್ಲದೆ ಎಷ್ಟೋ
ಒಳ್ಳೆಯ ನಿರ್ಣಯಗಳು
ಕಾಲಗರ್ಭದಲ್ಲಿ ಲೀನವಾಗಿಹುದಿಲ್ಲಿ
ಸರಿಕಂಡದ್ದನ್ನ ಒಪ್ಪುವ ಮನವಿಲ್ಲದೆ
ವ್ಯಕ್ತಿತ್ವವೆಂಬ ಪ್ರತಿಷ್ಠೆಯ ಕೂಸು
ಬಡವಾಗುವುದೆಂಬ
ಭಯ ಕಾಡುವುದು ಮನದಲ್ಲಿ...!!!

ಕಾಡಿದರೇ ಕಾಡಲಿ
ಒಪ್ಪಬಾರದೆ ಸರಿ ಕಂಡದ್ದನ್ನ
ನಾ, ನೀ, ಎಂಬ ಭಾವ
ಸೃಷ್ಟಿಯಲ್ಲಿ ಲೀನವಾಗುವ ಮುನ್ನ
ಬಿಡಬಾರದೆ 'ಅಹಂ'
ಎಂಬ ಭಾವವಾ?!

ಭಾವದರಿವು

ನೋವು ನಲಿವಿನ
ಚಕ್ರದೊಳಗೆ
ಸುತ್ತಿ ಬಂದಿರುವೆ
ವ್ಯತ್ಯಾಸವಿಲ್ಲವೇನೋ
ಇವರೆಡರ
ನಡುವಿನ
ಭಾವದಲ್ಲಿ
ನಲಿವು
ಉಲ್ಲಾಸದಿಂದಿಟ್ಟರೇ
ನೋವು
ಬದುಕಿನಾರ್ಥವ
ನೀಡುತ್ತಾ
ಸಾಗುತ್ತದೆ
ಅದಕ್ಯಾಕೋ ಮನ
ಸಮಸ್ಥಿತಿಯ
ಭಾವವಿಲ್ಲದೆ
ಹಿಗ್ಗುವುದು, ಕುಗ್ಗುವುದು
ಇವರೆಡರ ನಡುವಿನ
ವ್ಯತ್ಯಾಸದ
ಪ್ರತಿಫಲಗಳರಿವಾದಲ್ಲಿ
ಬದುಕು
ಹಸನಾಗುವುದಿಲ್ಲಿ...!!!

ಚೈತನ್ಯ

ಕಣ್ಣಾಲಿಗಳಲ್ಲಿ
ಹರಿದ ಹನಿ
ನೀರು
ಮಡುಗಟ್ಟಿದ
ನೋವುಗಳ
ಅನಾವರಣ
ದುರ್ಬಲವಾದ
ಮನಸ್ಸಿಗೆ
ಶಕ್ತಿ ತುಂಬಿ
ಹೊಸ
ಚೈತನ್ಯ
ಹೊಸ
ಹುರುಪಿನೊಂದಿಗೆ
ಒಡನಾಟಕ್ಕಾಗಿ
ಹಾತೊರೆಯುವ
ಮನಸ್ಸು
ಹೊಸದರ
ಹುಡುಕುವುದರೊಂದಿಗಿನ
ಮತ್ತದೇ
ಒಡನಾಟ...!!

Thursday, 15 November 2012

ಅರಿವು

ಕೊನೆಯಿಲ್ಲದ
ಅರಿವು
ಅರಿತಷ್ಟು
ಮೊಗೆದಷ್ಟು
ಬತ್ತುವುದಿಲ್ಲ
ಅರಿಯುವುದರಲ್ಲಿ
ಇರಬಾರದು
ಆಯಾಸ
ಆದರೇಕೋ
ಕಾಡುವುದು
ಅರಿಯುವ
ಬತ್ತಳಿಕೆ
ಖಾಲಿಯಾದಂತೆ
ತುಡಿತವಿಲ್ಲದ
ಮನಕ್ಕೆ
ಅರಿಯುವ
ಅರಿತು
ಅದರಲ್ಲಿ
ಲೀನವಾಗುವ
ಕಾಳಜಿ
ಇಲ್ಲದಿರುವ
ಭಾವ
ಕಾಡುವುದು...!!!

ರಹಸ್ಯ

ಅರ್ಥವಾಗದ
ಬದುಕಿನ
ರಹಸ್ಯಗಳು
ಅರ್ಥವಾಗದ
ಮನುಷ್ಯರ
ಸ್ವಭಾವಗಳು
ಬದುಕಿಗಾಗಿ
ಅದೆಷ್ಟೋ
ಒಡಂಬಡಿಕೆಗಳೋ...
ತನ್ನೊಳಿತಿಗಾಗಿ
ನಡೆ-ನುಡಿಗಳಲ್ಲಿ
ಬದಲಾವಣೆಗಳೋ...
ಎಲ್ಲವೂ ಅರ್ಥವಾಗದೇ
ಹಾಗೆ ಉಳಿಯುವುದು
ಅದನ್ನರಿಯುವಷ್ಟರಲ್ಲಿ
ಕಾಲನ ಕರೆಯಲ್ಲಿ
ಲೀನವಾಗುವುದು..!!!

Saturday, 10 November 2012

ಅಗಲಿಕೆ

ಬದುಕೆಂಬ ಮಾಯೆಯಲ್ಲಿ
ಅಗಲಿಕೆಯ ನೋವು
ಕಾಡುವುದು
ಅಲೆ ಅಲೆಯಾಗಿ
ಸಂಬಂಧಗಳ
ಒಡನಾಟದಲ್ಲಿ
ಕಳೆದ ಬದುಕಿನ
ಋತುಚಕ್ರದಲ್ಲಿ
ಬಿಗಿಯಾದ
ಸಂಬಂಧಗಳ
ಬಂಧನದಲ್ಲಿ
ಒಂದೊಂದು
ಕಳಚಿಕೊಂಡಾಗ
ಸಮುದ್ರದ
ಅಲೆ ಅಲೆಯಂತೆ
ಬಂದಪ್ಪಳಿಸುವುದು
ಅಪ್ಪಳಿಸಿದ ರಭಸಕ್ಕೆ
ತತ್ತರಿಸಿ ತಲ್ಲಣಿಸುವುದು
ಮನ..!!!

ದಾಹ

ನೀಡುವವನ
ಆಳದರಿವಿದ್ದರೇ
ನೀಡುವವನನ್ನೇ
ಬರಿದು ಮಾಡಿ
ಬಿಡುವ ಉತ್ಸಾಹ
ತುಂಬಿಹುದು
ಮನದಲ್ಲಿ
ಭರಿಸಲಾಗದಷ್ಟು,
ತೃಪ್ತಿ ಹೊಂದಲಾರದಷ್ಟು
ಕನಸುಗಳ
ಸಾಲು ಸಾಲು
ಒಂದೇ ಎರಡೇ
ತೃಪ್ತಿ ಇಲ್ಲದ
ಭಾವದೊಂದಿಗಿನ
ಒಡನಾಟ
ಏಕೋ, ಏನೋ
ಒಂದು ಗೊತ್ತಿಲ್ಲ
ಬೇಡ ಎನ್ನುವುದಕ್ಕಿಂತ
ಬೇಕು ಎನ್ನುವುದೇ
ಎದ್ದು ಬಂದು
ನಿಲ್ಲವುದು
ಮನದಿಂದ...!!!

ಈರ್ಷ್ಯೆ

ಈರ್ಷ್ಯೆ ಕಳಚಿ
ಬದುಕಬೇಕೆಂದಿರುವೆ
ನನ್ನಲ್ಲಿ ಇಲ್ಲದ್ದು
ಇತರರಲ್ಲಿ
ಕಂಡಾಗ
ಅದರ ಸವಿಯನ್ನ
ಸ್ವೀಕರಿಸಬೇಕೆಂದಿರುವೆ
ಬಣ್ಣ ಬಣ್ಣದ
ಕನಸುಗಳನೊತ್ತ
ಬದುಕಿನ ಚಿತ್ರಣವು
ವಿಭಿನ್ನವಾಗಿರುವ
ನೆಲೆಯಲ್ಲಿ
ನನ್ನತನವ
ನಾ ಹುಡುಕುತ್ತಾ
ಇತರರ ಭಾವವ
ಗೌರವಿಸುತ್ತಾ
ಬದುಕ
ಹಸನಾಗಿಸಬೇಕೆಂದಿರುವೆ
ಓ ಮನಸ್ಸೇ
ಸಹಕರಿಸಲಾರೆಯಾ?

Monday, 5 November 2012

ಭ್ರಮೆ

ಬಲ್ಲವರೆನ್ನುವರು
ನಾ ಎಲ್ಲ
ಬಲ್ಲನೆಂದೂ
ಎಲ್ಲವೂ ತಿಳಿದೆ
ಎಂಬ ಭ್ರಮೆ
ಆವರಿಸಿದಾಗ
ಮನಸ್ಸಿನ
ಸಹಜತೆಯನ್ನ
ಕಳೆದುಕೊಳ್ಳುವುದಿಲ್ಲಿ
ಕಲಿಯುವ
ಭಾವವಿರುವವರೆಗೂ
ಉಲ್ಲಾಸದಿಂದಿಹದು
ಮನ...!!!
ಕಲಿತೆ ಎಂಬ
ಭ್ರಮೆ ಆವರಿಸಿದಾಗ
ಸೀಮಿತ
ಪರದೆಯೊಳಗೆ
ಬಂಧಿಯಾಗಿಹುದು
ಮನ....!!!

ಅಂತರಾಳ

ನನ್ನ ನಾ
ಅರಿವ ಮುನ್ನ
ನನ್ನೊಳಗಿರುವ
ವಿಚಾರಗಳ ಆಳದ
ಅರಿವಾಗಲಿಲ್ಲ
ನಿಶ್ಶಬ್ಧತೆಯಲ್ಲಿ
ಹುಡುಕುತ್ತಾ
ಹೋದಷ್ಟು
ಅಲ್ಲಿಹುದು
ಬರಿದಾಗದ
ವಿಚಾರಗಳು
ಭುವಿಯ
ಆಳದಲ್ಲಿರುವ
ವಜ್ರ ಚಿನ್ನ,
ಬೆಳ್ಳಿ, ತಾಮ್ರಗಳಿಗೂ
ಮಿಗಿಲಾದಷ್ಟು
ವಿಚಾರಗಳು
ತುಂಬಿಹುದು
ಅದನ್ಹೆಕ್ಕುವ
ಕೆಲಸವಾಗಬೇಕಿಹುದು
ಮನದಾಳದಿಂದ...!!!

ಸಾವು

ಹುಟ್ಟಿನೊಂದಿಗೆ
ಗಂಟು ಕಟ್ಟಿಕೊಂಡಿಹುದು
ನಂಟು
ಹುಟ್ಟಿದಾಕ್ಷಣ
ಸಂಗಾತಿಯಂತೆ
ಬೆನ್ನಹಿಂದೆ
ಬೇಡವೆಂದರೂ
ಬೆಂಬತಿಹುದು
ಅದರರಿವಿದ್ದರೂ
ನಿರೀಕ್ಷೆಗಳ
ಸಾಗರದೊಳಗೆ
ತೇಲುವ
ಅದರೊಳಗೆ
ಕೊಚ್ಚಿಹೋಗುವ
ಬಯಕೆಗಳು
ಒಂದೇ ಎರಡೇ
ಲೆಕ್ಕವಿಲ್ಲದಷ್ಟು
ಕಟ್ಟಿಕೊಂಡ
ಬಯಕೆಗಳ
ಬೆನ್ನಹಿಂದೆಯೇ
ಸಾವು
ನೋಡಿ ನಗುತಿಹುದು!!!

ರೂಪಾಂತರ

ರೂಪಾಂತರವೇ
ಮಾಯೆಯಾಗಿ
ಕಾಣುತಿಹುದು
ರೂಪಾಂತರವೆಂಬ
ಮಾಯೆಯಲ್ಲಿ
ವಸ್ತುಗಳ ಬದಲಿ
ರೂಪವೇ ಹೊರತು
ಮತ್ತೇನು
ಹೊಸದಿಲ್ಲವೆನ್ನಿಸುತ್ತಾ
ಸಾಗುವುದು
ಸರಳವಾದ
ಬದುಕಿಗಾಗಿ
ಹಲ ಹಲ
ರೂಪಾಂತರ!
ಸಿಲುಕಿಕೊಂಡಿವೆವು
ನಾವು..?
ರೂಪಾಂತರವೆಂಬ
ಮಾಯೆಯಲ್ಲಿ...!!!

ಮಾಯೆ

ಅನಿವಾರ್ಯವಲ್ಲದ
ಬದುಕು
ಭುವಿಗೆ ಬಂದಾಗ
ಅರಿವಿಲ್ಲದ್ದು
ಹೊರಟು ನಿಂತಾಗ
ಅರಿವಿಲ್ಲದ್ದು
ಎಲ್ಲವೂ
ಒಂದು ಮಾಯೆಯೊ
ಮಾಯೆಯೆಂಬ
ಬದುಕೋ
ಅರಿವಿಲ್ಲದ ಮನ
ಅರಿಯುವ ಮುನ್ನ
ಮಣ್ಣಲ್ಲಿ ಮಣ್ಣಾಗಿ
ಹೋಗುವ ದೇಹ
ಅರಿತಿದ್ದು ಮಾತ್ರ
ಶೂನ್ಯವೆಂಬತಿಹುದು

ಕಾಲ

ಕಾಲಗರ್ಭದಲ್ಲಿ
ಸೇರುತಿಹುದು
ಘಟನಾವಳಿಗಳು
ಒಂದಷ್ಟು ಸವಿ
ಒಂದಷ್ಟು ಕಹಿ
ನೆನಪುಗಳು
ಘಟಿಸಿದ
ಘಟನಾವಳಿಗಳು
ಮಿಂಚಿ
ಮರೆಯಾಗುತಿಹುದು
ಹಳೆಯ
ನೆನಪುಗಳೊಂದಿಗೆ
ಹೊಸದರ
ಅರಸುವಿಕೆಯ ನಡುವೆ
ಬಂದಿದ್ದು, ಹೋಗಿದ್ದು
ಮಾತ್ರ ಘಟನೆಗಳು
ಕಾಲ ಮಾತ್ರ
ಯಾವುದರ ಪರಿವೇ
ಇಲ್ಲದೆ ಓಡುತಿಹುದು...!!!

Sunday, 21 October 2012

ಹುಡುಕುವಿಕೆ

ಹುಡುಕುತಿಹರು
ಹೊಸತನವನ್ನ
ಪ್ರೀತಿ, ಪ್ರೇಮ
ನಾನು ನನ್ನವರು
ಪರಿಧಿಗೂ ಮೀರಿದ
ಬದುಕು ಇದೆಯೇ
ಎಂದೂ...!!
ಆದರೆ, ಅರಿವು
ಸೀಮಿತದಲ್ಲಿದೆಯೋ
ಸಿಮಿತವೇ
ಬದುಕಾಗಿದೆಯೋ
ಜಿಜ್ಞಾಸೆಯಲ್ಲಿಹುದು
ಹುಡುಕುವವರು
ಹುಡುಕುತ್ತಿರುವವರು
ಹುಡುಕದೇ ಅದೇ
ಪರಿಧಿಯಲ್ಲಿ
ಸುತ್ತುತ್ತಿರುವವರು
ಗೊಂದಲದ ಬದುಕಿನ
ಗೋಜಿಗೆ ಅಂಟಿಕೊಂಡವರು
ಮಾಯೆಯೆಂಬ
ಮನದ ಜೊತೆ
ಓಡುತ್ತಿಹರು...!!!

ಭ್ರಮೆ

ಕಲಿತೆ ಎಂಬ ಭ್ರಮೆ
ಕಲಿಯುವ ಮನಸ್ಸಿಗೆ
ಕಡಿವಾಣವಿದ್ದಂತೆ
ಕಲಿಯುತ್ತಾ
ಕಲಿಸುತ್ತಾ
ಕಲಿತ ಸವಿಯನ್ನ
ಅನುಭವಿಸುತ್ತಾ
ಬದುಕನ್ನ
ಹಸನಾಗಿಸುತ್ತಾ
ಸೃಷ್ಟಿಯ ವೈಚಿತ್ರವ
ಸವಿಯುವವನೇ ಜಾಣ
ಅದರೊಳಗೆ
ಅಡಗಿಹುದು
ಅದೆಷ್ಟೋ ನಿಗೂಢಗಳು
ಒಂದಕ್ಕೊಂದು
ಬೆಸೆದುಕೊಂಡಿರುವುದು
ಬದುಕಿನ ಕೊಂಡಿ...!!

ಕಲರವ

ಪದಗಳ ಕಲರವ
ತಾ ಮುಂದು
ನಾ ಮುಂದು
ಹೆಕ್ಕಿಕೊಳ್ಳಲು
ಬಲು ಪ್ರಯಾಸ
ಒಂದರ ಹಿಂದೆ
ಒಂದರ ಜೋಡಣೆ
ಬಲು ಕಷ್ಟವಯ್ಯ
ಬರುವ ಪದಗಳು
ಒಮ್ಮೆಲೆ ನುಗ್ಗಿ ಬರುವ
ರಭಸಕ್ಕೆ ಸೋತು
ಬಲು ಪ್ರಯಾಸದ
ಸಾಲುಗಳ ಜೋಡಣೆ
ಜೋಡಣೆಯಲ್ಲಿ
ಒಂದೊಂದು ಬಾರಿ
ಅದ್ಬುತ ಜೋಡಣೆ
ಮತ್ತೊಂದು ಬಾರಿ
ನಿರಾಯಸ ಜೋಡಣೆ
ಎಲ್ಲವೂ
ನುಡಿಮುತ್ತುಗಳಾಗಲು
ಸಾಧ್ಯವೇ...!!!

ತೋಟ

ಬಯಕೆಗಳ ತೋಟದಲ್ಲಿ
ಎಲ್ಲೆಲ್ಲೂ
ಸುತ್ತುವ ಬಯಕೆ
ಕೆಲವೊಂದು ಕಡೆ
ಅಂಜಿಕೆ
ಕೆಲವೊಂದು ಕಡೆ
ಭಯ
ಅದಕ್ಕಿರುವ ಕಾರಣವೂ
ಸಮಾಜದ
ಕಟ್ಟುಪಾಡುಗಳು
ಒಮ್ಮೊಮ್ಮೆ
ಮನಸ್ಸಿಗೂ
ಅನ್ನಿಸುವುದುಂಟು
ಕಟ್ಟುಪಾಡುಗಳು
ಬೇಕಿತ್ತೇ...?
ಇಲ್ಲದಿದ್ದರೇ
ಬಯಕೆಗಳ ತೋಟಕ್ಕೆ
ನುಗ್ಗಿದ ಮನಸ್ಸಿಗೆ
ಕಡಿವಾಣ
ಎಲ್ಲಿರುತ್ತಿತ್ತು..!?

ನೋವು

ಅನ್ಯರಿಗೆ ನೋವು
ಕೊಡುವ ಮುನ್ನ
ಅನ್ಯರ ಮನಸ್ಸಿಗೆ
ನೋವಾಗುವ ಮುನ್ನ
ಅನ್ಯರ ಮೇಲೆ ದರ್ಪ
ತೋರಿಸುವ ಮುನ್ನ
ಒಮ್ಮೆ ಎಲ್ಲವನ್ನೂ
ತಾನು ಅನುಭವಿಸಿ,
ನಂತರವೂ ನಿನಗೆ
ಮನಸ್ಸಾದಲ್ಲಿ
ಮನಸ್ಸಿಲ್ಲದ
ದೇಹವಿದ್ದಂತೆ...!!!

Tuesday, 9 October 2012

ಮೋಹ

ಅರಿವಿಲ್ಲದೆ
ಮೋಸಹೋಗುವ
ಮನಸ್ಸು
ಅರಿವಿದ್ದರೂ
ಮೋಸಹೋಗುವ
ಮನಸ್ಸು
ಯಾಕೋ, ಏನೋ
ಒಂದು ಗೊತ್ತಿಲ್ಲ
ಅರಿವಿದ್ದರೇ
ಮೋಸ
ಹೋಗುವುದಿಲ್ಲವೆಂದು
ಹೇಳುವ
ಮಂದಿಯು ಕೂಡ
ಮೋಸ
ಹೋಗುವುದುಂಟು
ಇಲ್ಲಿ ಅರಿವಿನ
ಸಮಸ್ಯೆಯಲ್ಲ
ಮೋಹವೆಂಬ
ಮಾಯೆ
ಆವರಿಸಿದಾಗ
ಮೋಸ
ಹೋಗುವುದುಂಟು...!!!

Friday, 5 October 2012

ಮಾಯೆ

ನಾ, ನೀ, ಅವ
ಎಲ್ಲವೂ ಭ್ರಮೆಯೇ
ಭ್ರಮೆಯಂತೆ
ಕಾಣುವುದಿಲ್ಲಿ
ನಾನ್ಯಾರೋ
ನೀನ್ಯಾರೋ
ಅವನ್ಯಾರೋ
ಗೊತ್ತಿಲ್ಲ
ಹುಟ್ಟುವಾಗ
ಸಾಯುವಾಗ
ದೇಹಕ್ಕೆ ಅಂಟಿದ
ನಂಟು ಇದು,
ಹುಟ್ಟುವ
ಮುಂಚೆ ಇಲ್ಲದ
ವ್ಯಾಮೋಹ
ಹುಟ್ಟಿದಾಕ್ಷಣ
ಶುರುವಾಗುವುದಿಲ್ಲಿ
ಎಲ್ಲವೂ ಮಾಯವೋ
ಈ ಜಗದಲ್ಲಿ...!!!

Wednesday, 3 October 2012

ಭಿನ್ನತೆ

ನಿನ್ನ ಅಂತರಂಗದ
ಒಳಹೊಕ್ಕಲಾರೆ
ನಿನ್ನ ಭಾವನೆಗಳ
ಅರಿಯದಾದೆ
ನಿನ್ನ ಸುಖದುಃಖಗಳ
ಪರಿ ಎಂತೋ, ಏನೋ
ಅರಿಯದಾದೆ
ಅರಿಯುವ ಮನವಿದ್ದರೂ
ನಿನ್ನ ನನ್ನ ನಡುವಿನ
ಭಾವ ಬಂಧನವು
ಭಿನ್ನ ಭಿನ್ನವಾಗಿಹದಿಲ್ಲಿ

ತಾಣ

ಸುಂದರವಾದ
ತಾಣವಿದು
ನೋಡುವ
ಕಣ್ಣಿಗೆ
ವಿವಿಧತೆಯು

ಕಲ್ಪನೆಯ
ಮನಕ್ಕೆ
ಕಣ್ಣಿಗೆ ಕಂಡಿದ್ದು
ಹಲ ಚಿತ್ರ ವಿಚಿತ್ರ
ಕಲ್ಪನೆಗಳು

ಅಕ್ಷಯಪಾತ್ರೆಯಂತೆ
ಬರಿದಾಗದಿಲ್ಲಿ
ಎಲ್ಲವೂ ಮನ
ಬಯಸಿದಂತೆ
ಸಿಗುವುದಿಲ್ಲ

ತಾಣದಲ್ಲಿ
ಕಂಡಿದ್ದು
ನೋಡಿದ್ದು
ಎಲ್ಲವೂ ಒಬ್ಬೊಬ್ಬರಲ್ಲಿ
ಒಂದೊಂದು
ಬಗೆಯಲ್ಲಿವು...!!!

ಸುಖ

ಆರೋಗ್ಯವೇ
ಭಾಗ್ಯವೆನ್ನುವರು
ಕೆಲವರು
ಹಣವೇ
ಭಾಗ್ಯವೆನ್ನುವರು
ಇನ್ನಕೆಲವರು
ಭಾಗ್ಯವೆನ್ನುವುದು
ದೇಹಕ್ಕೊ
ಮನಸ್ಸಿಗೋ
ಗೊತ್ತಿಲ್ಲದ
ಮನುಷ್ಯ
ಆತ್ಮಸುಖದರಿವು
ಅರಿಯಲಾರದ
ಮೂರ್ಖನಂತಿಹನು!!

ಸತ್ಯ-ಸುಳ್ಳು

ಸತ್ಯ-
ಸುಳ್ಳಗಳೆರಡರ
ಫಲಾಫಲಗಳ
ಅನುಭವ
ಮನಸ್ಸಿನ
ಭಾವಗಳೊಂದಿಗೆ
ಮಿಲನವಾಗಿಹುದು
ಸತ್ಯಕ್ಕಿರುವ
ಗಟ್ಟಿತನ,
ಅಂಜಿಕೆಯಿಲ್ಲದ
ಭಾವ
ಸುಳ್ಳಿನಲ್ಲಿ
ಕಾಣ ಹೊರಟ
ಮನಸ್ಸಿಗೆ
ಸತ್ಯವೆಂಬ
ಭಾವ
ಸುಳ್ಳೆಂಬ
ಭಾವವನ್ನ
ನೋಡಿ
ಅಣಕಿಸುತಿಹುದು..!!!

ಬದುಕು

ಬದುಕು ಒಂದು ಪುಸ್ತಕವಿದ್ದಂತೆ
ಒಂದೊಂದು ದಿನ
ಒಂದೊಂದು ಪುಟವಿದ್ದಂತೆ
ಒಂದೊಂದು ಪುಸ್ತಕವು
ಒಂದೊಂದು ವರ್ಷವಿದ್ದಂತೆ
ಬದುಕಿದ ಹಲ ವರ್ಷಗಳು
ಹಲ ಪುಸ್ತಕಗಳ ಭಂಡಾರವಿದ್ದಂತೆ
ಕೆಲವೊಂದು ಪುಟ
ಮನಸ್ಸಿಗೆ ಇಷ್ಟವಾಗಬಹುದು
ಕೆಲವೊಂದು ಪುಟ
ಮನಸ್ಸಿಗೆ ಇಷ್ಟವಾಗದಿರಬಹುದು
ಕೆಲವೊಂದು ಪುಸ್ತಕ
ಬದುಕಿನ ದಿಕ್ಕನೇ ಬದಲಿಸಬಹುದು
ಕೆಲವೊಂದು ಪುಸ್ತಕ
ನಿರಾಯಾಸವಾದ ಬದುಕಾಗಿರಬಹುದು
ಬದುಕೇ ಹಾಗೆ
ಎಲ್ಲವೂ ಒಳ್ಳೆಯ
ಪುಸ್ತಕಗಳಾಗಿರುವುದಿಲ್ಲ
ಬದುಕಿದ ಒಳ್ಳೆಯ
ಪುಸ್ತಕದ ನೆನಪಿನೊಂದಿಗೆ
ಸಾಗುತ್ತಾ ಅದನ್ನ
ಹೆಕ್ಕುತ್ತಾ ಸಾಗುತ್ತದೆ
ಬದುಕು....!!!

ಮಧುರ

ನೀ ಇಟ್ಟ ನಂಬಿಕೆ
ನಿನ್ನೊಳಗಿರಲಿ
ನೀ ಇಟ್ಟ ಪ್ರೀತಿ
ನಿನ್ನೊಳಗಿರಲಿ
ನೀ ಇಟ್ಟ ವಿಶ್ವಾಸ
ನಿನ್ನೊಳಗಿರಲಿ
ನಂಬಿಕೆ, ಪ್ರೀತಿ, ವಿಶ್ವಾಸ
ಎಲ್ಲವೂ ನಿನ್ನೊಳಗಿದ್ದಾಗ
ಮಧುರವಾಗಿಹುದು
ಬಹಿರಂಗವಾದಲ್ಲಿ
ಮಧುರತೆಯ ಭಾವವು
ಕಿತ್ತ ಹೂವು
ಬಾಡಿದಂತಾಗುವುದು..!!

Monday, 1 October 2012

ಸುಖ

ಆರೋಗ್ಯವೇ
ಭಾಗ್ಯವೆನ್ನುವರು
ಕೆಲವರು
ಹಣವೇ
ಭಾಗ್ಯವೆನ್ನುವರು
ಇನ್ನಕೆಲವರು
ಭಾಗ್ಯವೆನ್ನುವುದು
ದೇಹಕ್ಕೊ
ಮನಸ್ಸಿಗೋ
ಗೊತ್ತಿಲ್ಲದ
ಮನುಷ್ಯ
ಆತ್ಮಸುಖದರಿವು
ಅರಿಯಲಾರದ
ಮೂರ್ಖನಂತಿಹನು!!

ಮಾತು-ಮೌನ

ನಿನ್ನ ಅಂತರಂಗದ
ಒಳಹೊಕ್ಕಲಾರೆ
ನಿನ್ನ ಭಾವನೆಗಳ
ಅರಿಯದಾದೆ
ನಿನ್ನ ಸುಖದುಃಖಗಳ
ಪರಿ ಎಂತೋ, ಏನೋ
ಅರಿಯದಾದೆ
ಅರಿಯುವ ಮನವಿದ್ದರೂ
ನಿನ್ನ ನನ್ನ ನಡುವಿನ
ಭಾವ ಬಂಧನವು
ಭಿನ್ನ ಭಿನ್ನವಾಗಿಹದಿಲ್ಲಿ

ಪ್ರೀತಿ

ನೀ ಬಿತ್ತ
ಪ್ರೀತಿಯ
ಸಂಕೋಲೆ
ಹೆಮ್ಮರವಾಗುವ
ಬದಲು
ಸಸಿಯಾಗಿಯು
ಚಿಗುರೊಡೆಯಲಿಲ್ಲ!!!
ನೈಜತೆಯಿಲ್ಲದ
ಪ್ರೀತಿಯ ಭಾವ
ತೋರಿಕೆಯೆಂಬ
ಭಾವದೊಂದಿಗೆ
ಮಿಲನವಾಗಿ
ಕುಸಿದು
ಬಿದ್ದಿಹುದಿಲ್ಲಿ...!!!

Monday, 10 September 2012

ಬಯಕೆ

ಮನವೆಂಬ
ತೋಟದಲ್ಲಿ
ಬಯಕೆಗಳೆಂಬ
ವಿಧ ವಿಧ
ಗಿಡಗಳು
ಒಂದಕ್ಕಿಂತ
ಒಂದು ಸೊಗಸು
ಸೊಗಸು
ಅನಾವರಣಗೊಳ್ಳಲು
ಶ್ರಮವೆಂಬ
ನೀರನ್ನ
ಶ್ರದ್ಧೆಯೆಂಬ
ಗೊಬ್ಬರವನ್ನ ಚೆಲ್ಲಿ
ಶ್ರಮ, ಶ್ರದ್ಧೆಗೆ
ತಕ್ಕಂತೆ
ಪ್ರತಿಫಲಗಳ
ಅನಾವರಣಗೊಳ್ಳುವುದಿಲ್ಲಿ...!!!

Thursday, 6 September 2012

ಊಟ

ಊಟದಲ್ಲಿಯು
ಹಲ ಬಗೆಯ
ಸ್ವಾಹಗಳುಂಟು
ಶ್ರೀಮಂತನಿಗೆ
ಮೃಷ್ಟಾನ್ನವಂತೆ
ಮಧ್ಯಮನಿಗೆ
ಇಷ್ಟಾನ್ನವಂತೆ
ಬಡವನಿಗೆ
ತಂಗಾಳ್ನವಂತೆ
ಭಕ್ತನಿಗೆ
ಪ್ರಸಾದವಂತೆ

ಬೇಕಿತ್ತು
ಸ್ವಾಹದಲ್ಲಿಯು
ಭಕ್ತಿಭಾವ
ಎಲ್ಲಡೆಯು
ಪಸರಿಸಬೇಕಿಹುದು
ಸ್ವಾಹವೆಂಬ ಭಾವವು
ಪ್ರಸಾದವೆಂಬ
ಭಾವವಾಗಿ
ವಿಜೃಂಭಿಸಬೇಕಿಹುದು...!!!

Wednesday, 5 September 2012

ನಗು

ನಕ್ಕು ನಲಿಯುವ
ಚಟವಿರಬೇಕು
ಮನದಲ್ಲಿ

ಅದು ಒಂದಿಷ್ಟು
ಅತ್ತಿತ್ತ ಸುಳಿಯದಂತೆ
ಹಿಡಿತವಿಡುವ
ಶಕ್ತಿ ತುಂಬಿರಬೇಕು

ದುಃಖವನ್ನು ಸಹ
ನಗುವಾಗಿ
ಪರಿವರ್ತಿಸುವ
ಪರಿಣಿತಿ
ಸಿದ್ಧಿಸಿರಬೇಕು

ಹುಚ್ಚನೆಂದರು
ಸರಿಯೇ
ತಿಕ್ಕಲನೆಂದರು
ಸರಿಯೇ
ನಗುವೇ ಜೀವನದ
ಗುರಿಯಾಗಿರಬೇಕು...!!!

Saturday, 1 September 2012

ಆತ್ಮೀಯತೆ

ಆತ್ಮೀಯತೆ
ಭಾವವು
ಬರ ಬರುತ್ತಾ
ನಂಬಿಕೆಯೆಂಬ
ಭಾವದೊಂದಿಗೆ
ಗಟ್ಟಿಯಾಗಿಹದು

ಆತ್ಮೀಯತೆ
ನಂಬಿಕೆಗಳೆರಡು
ಗಟ್ಟಿಯಾದಂತೆ
ಸಂಬಂಧಗಳ
ಭಾವವು
ಗಟ್ಟಿಯಾಗುವುದು

ಇವೆರಡರ
ಅವಿನಾಭಾವ
ಸಂಬಂಧಗಳೇ
ಬದುಕಿನ ಬಂಡಿ
ಸರಾಗವಾಗಿ
ಸಾಗುವುದಿಲ್ಲಿ..!!!

Thursday, 30 August 2012

ಅರಿವು

ಹನಿ ಹನಿ ನೀರು
ಹರಿದು ನದಿಯಾಗಿ
ಸಮುದ್ರದೊಂದಿಗೆ
ಬೇರೆಯುವ ಹಾಗೆ
ಮನದಲ್ಲಿರುವ
ಒಂದೊಂದು
ವಿಚಾರದರಿವು
ಬೆಳೆಯುತ್ತಾ
ಬೆಳೆಯುತ್ತಾ
ಜ್ಞಾನ ದೇಗುಲದೊಳಗೆ
ಸಾಗಿ ಜ್ಞಾನದ
ಹಸಿವಾ ನೀಗಿಸಿಕೊಳ್ಳುತ್ತಾ
ಸಾಗುತ್ತದೆ ...!!!

Tuesday, 28 August 2012

ನೋಟ

ಇರುವೆಗಳ
ಸಾಲು ಸಾಲು
ಶಿಸ್ತುಬದ್ಧ
ಸಾಗುವಿಕೆ
ಮುಂದಿನದರ
ಹಿಂದೆ ಹಿಂದೆ
ತನಗಾಗಿ
ಏನು ಅಲ್ಲ
ಎಲ್ಲವೂ ಅವ
ನಡೆಸಿದಂತೆ
ಎನ್ನುವಂತೆ
ಸಾಗುತಿಹದು
ಬುದ್ಧಿಕೊಟ್ಟ
ಮನುಜಗೆ
ಪ್ರಶ್ನೆ ಮಾಡುವ
ಮನ ಕೊಟ್ಟು
ಪ್ರತಿಯೊಂದರಲ್ಲೂ
ಪ್ರಶ್ನಾರ್ಥಕ ಚಿಹ್ನೆ..!!!

Monday, 27 August 2012

ಧ್ಯಾನ

ಉಸಿರು ಉಸಿರಲ್ಲಿ
ಅಡಗಿಹದು
ಜೀವದ ಚೈತನ್ಯ
ಬಂದ ಉಸಿರೆಷ್ಟೋ
ಹೋದ ಉಸಿರೆಷ್ಟೋ
ಬಂದಿದ್ದು ಹಾಗೆ
ಹೋಗಿದ್ದು ಹಾಗೆ
ಬಂದುಹೋದ್ದದರಿವು
ಮನದಲ್ಲಿ ಮೂಡಿದ್ದರೇ
ಧಾನ್ಯದ ಸ್ಥಿತಿಯ
ಭಾವವೇರ್ಪಡುತ್ತಿತ್ತೋ
ಏನೋ ಗೊತ್ತಿಲ್ಲ !!!

Saturday, 25 August 2012

ಸಮಾನತೆ


ಸಮಾನತೆಯ
ಭಾವ ಹುಡುಕುತ್ತಾ
ಸಾಗುತ್ತಿತ್ತು ಮನ...

ವೃತ್ತಿಯಲ್ಲಿ
ಆಹಾರದಲ್ಲಿ
ಕಿರಿಯರಲ್ಲಿ
ಹಿರಿಯರಲ್ಲಿ
ಬುದ್ದಿಜೀವಿಗಳಲ್ಲಿ
ಹೀಗೆ ಹುಡುಕುತ್ತಾ
ಸಾಗಿದ ಮನಕ್ಕೆ

ಸಮಾನತೆಯು
ಇರಬೇಕಾದ
ಕಡೆ ಇಲ್ಲವಾಗಿಹ
ಭಾವ ಕಾಡುತ್ತಾ,
ಕ್ಷೀಣಿಸುತ್ತಾ
ಸಾಗಿಹುದಿಲ್ಲಿ

ಪೈಪೋಟಿಯೆಂಬ
ಈ ಜಗದಲ್ಲಿ
ಅದ ಕಾಣುವ
ಮನಸ್ಸು ಇಂದು
ಇದ್ದರೂ
ಇಲ್ಲದಂತಾಗಿಹುದು

ಕೊನೆಗೊಂದು ದಿನ
ಸಮಾನತೆ
ಎಂಬ ಪದದ ಅರ್ಥ
ಹುಡುಕುವ
ಪರಿ ಸೃಷ್ಟಿಯಾದರೇ
ಆಶ್ಚರ್ಯವಾಗುವುದಿಲ್ಲವೆನೋ...!!!

Thursday, 23 August 2012

ವಿಪರ್ಯಾಸ

ನೋವು ನಲಿವು
ಮನಸ್ಸಿನ
ಪರಿಕಲ್ಪನೆಯಷ್ಟೇ
ನೋವಿಗೆ ದುಖಃ
ನಲಿವಿಗೆ ಸಂತೋಷ
ವ್ಯಕ್ತವಾಗುವ
ಭಾವವಷ್ಟೇ
ಮನಸ್ಸು ಬಯಸುವ
ಸುಖದರಿವು ಸುಖದ
ಕೊನೆಯತ್ತ
ಸೂಚಿಸುತ್ತಾ
ಸಾಗಿದರೇ
ನೋವು ಅರಿವು
ಪಡೆಯುವುದರತ್ತ
ಸಾಗುತ್ತದೆ,
ವಿಪರ್ಯಾಸ
ಮನಸ್ಸಿನ ಬಯಕೆ
ಮಾತ್ರ ಸುಖದರಿವು..!!

Wednesday, 22 August 2012

ಕನಸು-ನನಸು

ಭವ್ಯ ಕನಸೊಂದು
ಬಂದು ನಿಂತತೆ
ಭವ್ಯತೆಯ
ಅನಾವರಣವಾದಂತೆ
ನೋಡು ನೋಡುತ್ತಿದ್ದಂತೆ
ಕನಸುಗಳೆಲ್ಲವೂ
ಸಾಕಾರವಾದಂತೆ
ಕಂಡ ಮನಕ್ಕೆ
ಎಚ್ಚರಿಕೆಯ
ಸಂದೇಶವೊಂದು
ರವಾನೆಯಾದಂತೆ
ಭಾಸವಾಗಿಹುದು
ಓ ಮನವೇ
ಇದು ಕನಸಿನ ಲೋಕ
ನೈಜತೆಯ ಲೋಕದಲ್ಲಿ
ಕಂಡಿದೆಲ್ಲವೂ
ಸಾಕಾರಗೊಳ್ಳಲು
ಪರಿಶ್ರಮವೆಂಬ
ಭಾವದೊಂದಿಗೆ
ನಡೆದಾಗ ನಿನ್ನ ಕನಸು
ನನಸಾಗುವುದಿಲ್ಲಿ...!!

Tuesday, 21 August 2012

ಕಟ್ಟುಪಾಡು

ಹೇ ಮನುಷ್ಯ ಜೀವವೇ
ನೀನೊಂದು
ಜೀವಿಯಾಗಿರದೇ
ಯಾಕಾಗಿ ಜಾತಿಯ
ಕಟ್ಟುಪಾಡುಗಳ
ಸೃಷ್ಟಿಸಿಕೊಂಡೆ!!
ನೀ ಸೇವಿಸುವ
ಗಾಳಿ, ನೀರು
ಬೆಳಕು
ಎಲ್ಲವೂ ಒಂದೇ
ಆದರೆ ನೀ ಸೃಷ್ಟಿ
ಮಾಡಿಕೊಂಡ
ಜಾತಿಯ
ಅನಿರ್ವಾಯತೆ
ನೀ ಅತೀ
ಬುದ್ದೀವಂತ
ಜೀವಿಯೆಂಬ
ಭಾವಕ್ಕಾಗಿಯೇ
ಎಂಬ ಭಾವ
ಕಾಡುತಿಹದು
ನೀ ಸೃಷ್ಟಿಸಿಕೊಂಡ
ಹಲ ದೇವರುಗಳ
ಭಾವವೂ ಕೂಡ
ಗೊಂದಲದ
ಗೂಡಾಗಿಹುದು
ಎಲ್ಲವೂ ಗೊಂದಲವ
ಸೃಷ್ಟಿ ಮಾಡುವ ನೀ
ಯಾವುದರ ಪರಿವೇ
ಇಲ್ಲದ ಪ್ರಾಣಿ
ಸಂಕುಲವು
ನೆಮ್ಮದಿಯ
ಬದುಕ ಸವಿಯುತಿವೆ
ಇಂದು ಅಲ್ಲಿ!!!

Thursday, 16 August 2012

ನೋವು - ನಲಿವು

ನೋಡುತ್ತಾ ನೋಡುತ್ತಾ ಸಾಗಿದಂತೆ ಕಾಲ ಸರಿಯುವುದು ಅರಿವಾಗಲಿಲ್ಲ, ಕಳೆದ ಕಾಲದಲ್ಲಿ ಘಟಿಸಿದ ನೋವು -ನಲಿವಿನ ಚಿತ್ರಣ ಮಾತ್ರ ಮನದ ಮೂಲೆಯಲ್ಲಿ ಕಾಯ್ದಿರಿಸಿಕೊಂಡು ಸಾಗುತ್ತಿದೆ ಬದುಕು, ಬದುಕೇ ಹಾಗೆ ಹಳೆಯ ಮಧುರವಾದ ನೆನಪುಗಳೊಂದಿಗೆ ಹೊಸತನವನ್ನು ಹುಡುಕುತ್ತಾ ಸಾಗುತ್ತಿದೆ.
ಈ ಸಾಗುವಿಕೆಯಲ್ಲಿ  ನಡೆದಾಡಿದ ರಸ್ತೆ, ಊರು, ಮನೆ, ಎಲ್ಲವೂ ನಮ್ಮ ಅನುಕೂಲತೆಗೆ ತಕ್ಕಂತೆ ಬದಲಾಯಿಸಿಕೊಂಡು ಸಾಗುತ್ತಿದ್ದೇವೆ, ಬದುಕಿಗೆ ಬದಲಾವಣೆ ಅನಿವಾರ್ಯವೇ  ಅನ್ನಿಸುತ್ತದೆ, ಎಲ್ಲರೂ ಬದಲಾದ್ದಂತೆ ನಾವು ಬದಲಾಗಬೇಕು ಎನ್ನುವ ಧೋರಣೆ ಮನದ ಮೂಲೆಯಲ್ಲಿ ಎಚ್ಚರಿಸಿ ಬದಲಾದ ಪರಿಸ್ಥಿತಿಗನುಗುಣವಾಗಿ ಸಾಗುತ್ತಿದ್ದೇವೆ. 
ಯಾವುದೋ ಒಂದು ಶಕ್ತಿ ನಮ್ಮನ್ನು ಕರೆದುಕೊಂಡು ಹೋಗುತ್ತಿರುವಂತೆ ಭಾಸವಾಗುತ್ತಿದೆ ನಮಗೆ, ನಾವು ನಮ್ಮ ಹಿತಕ್ಕಾಗಿ ಎಷ್ಟೋ ಅನಗತ್ಯವಾದ ಬದಲಾವಣೆ ಮಾಡಿಕೊಳ್ಳುವುದರ ಹಿಂದೆ ನಮ್ಮ ಸ್ವಾರ್ಥ ಅಡಗಿದೆ ಅನ್ನಿಸುತ್ತದೆ, ಯಾಕೆ ಹೀಗೆ ಎಂದರೆ ಉತ್ತರವಿಲ್ಲದ ನೋಟ, ಆಧುನಿಕತೆಯ ನವನವೀನಾ ಮಾದರಿಯ ಮನೆ, ಎಲೆಕ್ಟ್ರಾನ್ ಉತ್ಪನ್ನಗಳು, ತಂತ್ರಜ್ಞಾನದ ಪರಿಧಿಯಲ್ಲಿ ಬರುವ ಅವಶ್ಯಕತೆ ಇಲ್ಲದಿದ್ದರು ಇರುವಂತೆ ಬಿಂಬಿಸುತ್ತಿರುವ ಮೊಬೈಲ್, ಏನೆಲ್ಲ ಬಂದುಬಿಟ್ಟವು ಕಳೆದ 20 ವರ್ಷಗಳಲ್ಲಿ ಎಷ್ಟೊಂದು ಬದಲಾವಣೆ.
ಯಾವುದು ಇಲ್ಲದ ಅಂದಿಗೂ ಇಂದಿಗೂ ಹೊಲಿಕೆ ಅಜಗಜಾಂತರ. ಈ 20 ವರ್ಷಗಳಲ್ಲಿ ಇಷ್ಟೊಂದು ಬದಲಾವಣೆ ಆಗುತ್ತದೆ ಎಂದು ಅಂದು ಹೇಳಿದ್ದರೇ ಯಾರು ನಂಬುತ್ತಿರಲಿಲ್ಲವೇನೋ ಅಂದಿನವರು. ಎಷ್ಟೊಂದು ಬದಲಾವಣೆ ಇಂದು. ಅಂದು ಮನೆ ಮನೆಗೆ ವಿದ್ಯುತ್ ದೀಪಗಳು ಬಂದಾಗ ಜನರ ಮನದಲ್ಲಿ ಎಷ್ಟೊಂದು ಸಂಭ್ರಮ ನೆಲೆಸಿತ್ತೋ ಗೊತ್ತಿಲ್ಲ,  ಅದೇ ರೀತಿ  ತಂತ್ರಜ್ಞಾನ ಪರಿಧಿಯೊಳಗೆ ಬಂದ ಮಾಂತ್ರಿಕ ಎಂದು ಬಿಂಬಿತವಾದ ರೇಡಿಯೋದಿಂದ ಬರುವ ಧ್ವನಿಯನ್ನು ಕೇಳಿ ಜನರ ಮನಸ್ಸಿನಲ್ಲಿ ಇಂದೊಂದು ಮಾಂತ್ರಿಕ ಪೆಟ್ಟಿಗೆ ಅನ್ನಿಸಿಬಿಟ್ಟಿತ್ತು,  ಅದನ್ನು ಹೊಂದಿದವರೇ ಶ್ರೀಮಂತರು ಎನ್ನುವ ಭಾವ, ಜೊತೆಗೆ ಅದರಿಂದ ಬರುವ ಸಂಗೀತ, ನಾಟಕಗಳು, ವಾರ್ತೆಗಳ ಸವಿಯನ್ನು ರೇಡಿಯೋ ಹೊಂದಿದವರ ಮನೆ ಜಗಲಿಯಲ್ಲಿ ಜನಜಂಗಲಿಯೇ ಕಾಣಬಹುದಾಗಿತ್ತು.
ಇನ್ನೂ ನಾಟಕಗಳೇ ಪ್ರಧಾನವಾಗಿದ್ದ ಕಾಲವದ್ದು, ನಾಟಕದಲ್ಲಿ ಅಭಿನಯಿಸಿದ ಕಲಾವಿದರು ಕಣ್ಣಲ್ಲಿ, ಮನದಲ್ಲಿ ತುಂಬಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಕಾಲವದು. ಕಾಲದ ಪರಿಧಿಯಲ್ಲಿ ರೈತಾಪಿ ಜನರಿಗೆ ತಮ್ಮ ದೈಹಿಕ ದಣಿವಾರಿಸಿಕೊಳ್ಳಲು, ಮನಸ್ಸನ್ನು ಉಲ್ಲಾಸವಾಗಿರಿಸಲು ಅಂದು ನಾಟಕವೇ ಪ್ರಧಾನವಾಗಿತ್ತು. ನಾಟಕಗಳಲ್ಲಿ ರಾಮಾಯಣ, ಮಹಾಭಾರತದ ಕೆಲವೊಂದು ಭಾಗಗಳ ಆಯ್ಕೆ ಮಾಡಿಕೊಂಡು ನಾಟಕ ಮಾಡುತ್ತಿದ್ದ ಕಾಲವದ್ದು, ಅಂತಹ ಕಾಲದಲ್ಲಿ ನಾಟಕದಲ್ಲಿ ಬರುವ ಪಾತ್ರಧಾರಿಗಳೇ ಮೇಲುಗೈ ಸಾಧಿಸುತ್ತಿದ್ದರು. ರಾಮಾಯಣ, ಮಹಾಭಾರತದಲ್ಲಿ ಬರುವ  ಪಾತ್ರಧಾರಿಗಳಾದ ಶ್ರೀಕೃಷ್ಣ, ಶ್ರೀರಾಮಚಂದ್ರ, ಯುದಿಷ್ಠರ, ಕರ್ಣನ ಪಾತ್ರಗಳು ಹಾಗೂ ಅವರಲ್ಲಿರುವ ಒಳ್ಳೆಯ ನಡವಳಿಕೆಗಳನ್ನೇ ಮೈದುಂಬಿಸಿಕೊಳ್ಳುವುದೇ ಹೆಚ್ಚು. ನ್ಯಾಯಪರವಾದ ಪಾತ್ರಗಳನ್ನು ನೋಡಿ ನೋಡಿ, ಅದನ್ನು ತಮ್ಮಲ್ಲಿಯು ಅಳವಡಿಸಿಕೊಳ್ಳುತ್ತಿದ್ದರು.
ಸಹಕಾರದ ವಿಷಯದಲ್ಲಿ ಮಾತ್ರ ಹಸಿವು ಎಂದು ಬಂದಾಗ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು, ಅವನಿಗೆ ಬದುಕುವ ಸ್ಥೈರ್ಯವನ್ನು ತುಂಬ ಕೆಲಸ, ಬದುಕುವ ರೀತಿ ನೀತಿಗಳ ಪಾಠ ಹಿರಿಯರಿಂದ ಆಗುತ್ತಿತ್ತು, ಜೊತೆಗೆ ಆತನಿಗೆ ಮಾನಸಿಕವಾಗಿ ಸ್ಥೈರ್ಯ ತುಂಬುವಂತಹ ಕೆಲಸ ಕೂಡ ನಡೆಯುತ್ತಿದ್ದವು, ನ್ಯಾಯದ ಕಟ್ಟೆಯಲ್ಲಿ ಯಾರೊಬ್ಬರಿಗೂ ನೋವಾಗದಂತೆ ನ್ಯಾಯಪರವಾದ ತೀರ್ಪುಗಳನ್ನು ಕಾಯ್ದಿರಿಸಿಕೊಳ್ಳುತ್ತಿದ್ದರು.
ತನ್ನ ಊರು-ಕೇರಿಯ ಬಗೆಗಿನ ಅಭಿಮಾನ, ಅವುಗಳೊಡಗಿನ ಒಡನಾಟ ಹೆಚ್ಚು ಪ್ರೀಯವಾಗಿತ್ತು, ತನ್ನ ಹೊಲ, ತೋಟ, ತಾನು ಬೆಳೆದ ತೆಂಗು, ಮಾವು, ಧವಸಧಾನ್ಯಗಳ ಬಗೆಗಿನ ಕಾಳಜಿ, ತಾನು ಸಾಕಿದ ರಾಸುಗಳ ಬಗೆಗಿನ ಕಾಳಜಿಯುಕ್ತ ನೋಟ ಎಲ್ಲವೂ ಒಂದು ಶಿಸ್ತುಬದ್ಧವಾದ ಜೀವನಕ್ಕೆ ದಾರಿಯಂತೆ ಸಾಗುತ್ತಿದ್ದವು.
ಅಂದು ಅಂತಹ ವಾತಾವರಣವಿತ್ತು ಎಂದು ಇಂದಿನವರಿಗೆ ಹಿರಿಯರು ಹೇಳಿದ್ದರೇ ಹೌದಾ!!! ಎಂದು ಆಶ್ಚರ್ಯ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಆಧುನಿಕತೆ ಬೆಳೆದು ನಿಂತಿದೆ. ಅದನ್ನು ನಂಬುವ ಮನಸ್ಸು ಇಲ್ಲವಾಗಿದೆ, ಅದು ಒಂದು ಕಲ್ಪನೆ ಎನ್ನುವಷ್ಟರಮಟ್ಟಿಗೆ ಬದಲಾಗಿದೆ.  ಇಷ್ಟೊಂದು ಬದಲಾವಣೆ ಕೇವಲ 25-35 ವರ್ಷಗಳೊಳಗೆ, ಇಷ್ಟೆಲ್ಲ ಆಧುನಿಕತೆಯನ್ನು ಒಪ್ಪಿಕೊಳ್ಳುವುದರ ಜೊತೆ ಜೊತೆಯಲ್ಲಿ ನಮ್ಮಲ್ಲಿಯು ಮಾನವೀಯತೆಯ ಗುಣಗಳು ಹೆಚ್ಚು ಹೆಚ್ಚು ಬೆಳೆಯಬೇಕಾಗಿತ್ತು, ಆದರೆ ಮಾನವೀಯತೆ ಕ್ಷೀಣಿಸಿ, ಅಂತಹ ಗುಣಗಳನ್ನು ಹುಡುಕುವಷ್ಟರ ಮಟ್ಟಿಗೆ ಹಾಳಾಗಿಬಿಟ್ಟಿದೆ. ಆಧುನಿಕತೆ ಯುಗ ಮಾತ್ರ ಭರದಿಂದ ಬೆಳೆಯುತ್ತಾ ಸಾಗುತ್ತಿದೆ ಎಷ್ಟೊಂದು ಬದಲಾವಣೆಗಳು...  ಜೀವನವೆಂಬ ನಾಟಕರಂಗದಲ್ಲಿ ಏನೆಲ್ಲ ಏರು-ಪೇರುಗಳು ಅಲ್ಲವೇ? 

ಅಜ್ಜ-ಅಜ್ಜಿ


ಗೋಧೂಳಿಯಲ್ಲಿ
ರಾಸುಗಳ ಕಲರವ
ಮಂದಬೆಳಕಿನ
ಮನೆಯೊಳಗೆ
ಅಜ್ಜಿಯ ರಸಗವಳದ
ತಯಾರಿ

ಅಜ್ಜನ ಮನದ
ಮೂಲೆಯಲ್ಲಿದ್ದ
ನಾಟಕದ
ಪದಗಳ ಭಾವ
ಮೊಮ್ಮಕ್ಕಳೊಂದಿಗೆ
ಅನಾವರಣ

ಅದರರಿವು ಅರಿಯದ
ಮೊಮ್ಮಕಳಿಗೆ
ಅಜ್ಜನ ಅಭಿನಯ,
ಪದಗಳ ಮೂಲಕ
ವಿವರಣಾತ್ಮಕ
ಭಾವದ ಅನಾವರಣ

ಅಜ್ಜ-ಅಜ್ಜಿಯ
ಭಾವ ತುಂಬಿದ
ರಸದೌತಣ
ಸವಿದ ಮೊಮ್ಮಕಳಲ್ಲಿ
ಧನ್ಯತಾ ಭಾವ

ಅಂದು ಇದ್ದ
ನೈಜತೆಯ ಲೋಕ
ಇಂದು ಈಗ
ಬರಿದಾಗುತಿಹ
ಭಾವ ಎದೆಯೊಳಗೆ
ಕಾಡುತಿಹುದು...!!!

Tuesday, 14 August 2012

ಜಾತಿ

" ಎಲ್ಲಿತ್ತೊ? ಹೇಗಿತ್ತೊ?
ಒಂದು ಗೊತ್ತಿಲ್ಲ
ಕಟ್ಟುಪಾಡಿಗಳಿಗಾಗಿ
ಹುಟ್ಟಿಕೊಂಡಿತೋ?
ರೀತಿ ನೀತಿಗಳಿಗಾಗಿ
ಹುಟ್ಟಿಕೊಂಡಿತೋ?
ಸಾಮರಸ್ಯದ ಬದುಕಿಗಾಗಿ
ಹುಟ್ಟಿಕೊಂಡಿತೋ?
ಒಂದು ಗೊತ್ತಿಲ್ಲ
ಹುಟ್ಟಿಕೊಂಡಾಗ ಇರಲಿಲ್ಲ
ಕಲ್ಮಶದ ಮನಸ್ಸು
ಓ.... ಜಾತಿಯೆಂಬ
ವಿಷ ಬೀಜವೇ
ನೀ ಬೆಳೆದು ಹೆಮ್ಮರವಾಗಿ
ಅಧಿಕಾರವೆಂಬ ದಾಹಕ್ಕೆ
ಬಲಿಯಾಗಿರುವೇ
ಮನುಕುಲದ ಅಳಿವಿಗೆ
ಕಾರಣವಾಗಿರುವೇ
ನಿನಗೆ ಕೊನೆಯಿಲ್ಲವೇ ..!?"

ಸೋಲು, ಗೆಲುವು

ಸೋಲು, ಗೆಲುವು ಎಂಬುದು ಒಂದು ಸ್ಥಿತಿ, ನಾವು ಅದನ್ನು ಎಚ್ಚರಿಕೆಯಿಂದ ಸ್ವೀಕರಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಗೆದ್ದಾಗ ಸಂತೋಷ ಪಡುವ, ಸೋತಾಗ ಕೆಳಗುಂದುವ ಮನಸ್ಥಿತಿಯನ್ನು ಮೊದಲು ಬಿಡಬೇಕು, ಎರಡನ್ನು ಕೂಡ ನಾವು ಪ್ರೀತಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಗೆಲುವು ಇನ್ನೊಂದು ಗೆಲುವಿಗೆ ಸೋಪಾನವಾದರೆ, ಸೋಲು ಎಡವಿದ ದಾರಿಯನ್ನು ಎತ್ತಿ ತೋರಿಸಿ, ಇನ್ನೊಂದರ ಏಳ್ಗೆಗಾಗಿ ಶ್ರಮಿಸುತ್ತದೆ. ಸೋಲು-ಗೆಲುವು ಎರಡು ಶಾಶ್ವತವಾಗಿ ಇರುವ ಸ್ಥಿತಿಯಲ್ಲ, ಅಂತಹ ಶಾಶ್ವತವಲ್ಲದ ಸ್ಥಿತಿಗಾಗಿ ಸೋತ...
ಾಗ ನಾವು ಏನೋ ಕಳೆದುಕೊಂಡಂತಹ ಸ್ಥಿತಿ ನಿರ್ಮಾಣ ಮಾಡಿಕೊಂಡಲ್ಲಿ ನಮ್ಮ ಕಾಲವನ್ನು ಅದಕ್ಕಾಗಿ ವ್ಯಯ ಮಾಡಿದಂತಾಗುತ್ತದೆ, ಇಲ್ಲಿ ಕಾಲ ಮುಖ್ಯ ಅದರ ಸದ್ಬಳಕೆ ಮುಖ್ಯ, ಅದರರಿವು ನಮಗಾಗಬೇಕು ಅಷ್ಟೇ. ಯಾವುದೇ ಸ್ಥಿತಿಯನ್ನು ಸಮಾನ ಮನಸ್ಥಿತಿಯಲ್ಲಿ ಕೊಂಡೊಯ್ಯಬೇಕು. ಎಲ್ಲವನ್ನು ನಗುನಗುತ್ತಾ ಸ್ವೀಕರಿಸುವುದು ಮುಖ್ಯ. ನಾವು ನಮ್ಮ ಇನ್ನೆಷ್ಟು ಗೆಲುವು, ಇನ್ನೆಷ್ಟು ಸೋಲುಗಳನ್ನು ಎದುರುಗೊಳ್ಳಲು ಕಾರಣೀಭೂತರಾಗಬೇಕೋ ಗೊತ್ತಿಲ್ಲ... ಸೋತಾಗ ನಮ್ಮನ್ನು ನಾವು ಎಚ್ಚರದಿಂದ ಮುನ್ನೆಡೆಸುವ ಸ್ಥೈರ್ಯ ಬೆಳೆಸಿಕೊಳ್ಳಬೇಕು...

ಅರ್ಥವಾಗದ ಮಾತುಗಳು

ಅರ್ಥವಾಗದ ಮಾತುಗಳು:- ಸತ್ತಾಗ ಆತ್ಮಕ್ಕೆ ಶಾಂತಿ ಸಿಗಲಿ ಎನ್ನುವುದು? ಯಾರೇ ಸತ್ತರೂ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರೆ ಇರುವವರೆಗೂ ಅವರ ಆತ್ಮ ನೆಮ್ಮದಿಯಿಂದ ಇರಲಿಲ್ಲವೇ? ನೆಮ್ಮದಿ ಕಂಡುಕೊಳ್ಳಲು ಬರಲಿಲ್ಲವೇ? ನೆಮ್ಮದಿ ಬದುಕು ಅವರದಾಗಿರಲಿಲ್ಲವೇ? - ಶಾಂತಿ, ನೆಮ್ಮದಿಗಳಿಲ್ಲದ ಆತ್ಮದ ಹುಟ್ಟು ಯಾಕಾಗಿ ಎನ್ನುವ ಪ್ರಶ್ನೆ ಮೂಡುವುದಿಲ್ಲವೇ? ಸಾವಿನಲ್ಲಿ ಆತ್ಮಕ್ಕೆ ಶಾಂತಿ ಸಿಗುವುದಾದರೆ ಸಾವೇ ಪರಿಹಾರವೇ? ಇವೆಲ್ಲವೂ ಗೊಂದಲದ ಗೂಡಾಗಲಿಲ್ಲವೇ... ಸಾವಿನಲ್ಲಿ ಲೀನವಾಗುವುದು ದೇಹ ಮಾತ್ರ... ಆತ್ಮಕ್ಕೆ ಸಾವು ಎನ್ನುವುದು ಗೋಚರವಾಗದ ಸತ್ಯ...!!! ಅದರರಿವು ನಮಗಾಗಬೇಕು... ಇರುವತನಕ ನೆಮ್ಮದಿಯ ಬದುಕು ನಮ್ಮದಾಗಿರಬೇಕು ಅಲ್ಲವೇ???

ಸುಳ್ಳು-ಸತ್ಯ

ಸುಳ್ಳು ಎನ್ನುವುದು ಏನು? ಸತ್ಯ ಎನ್ನುವುದು ಏನು ಎನ್ನುವುದು ನಮ್ಮ ಮನಸ್ಸಿಗೆ ಗೊತ್ತಿರುತ್ತದೆ... ಸತ್ಯ ಕಹಿಯಾಗಿದ್ದರೂ ಅದನ್ನು ಅರಗಿಸಿಕೊಳ್ಳುವ ಮನಸ್ಸು ಬೇಕು... ಸುಳ್ಳು ಹೆಚ್ಚು ಹಿತವಾಗಿದ್ದರೂ ಅದನ್ನು ತೇಜಿಸುವ ಮನಸ್ಸು ಬೇಕು... ಸುಳ್ಳನ್ನು ತುಳಿದು ಸತ್ಯದ ಹಾದಿ ಹಿಡಿಯಬೇಕಾದರೇ... ಸುಳ್ಳು ಸತ್ಯದ ಬುನಾದಿಯಾಗಿಯೇ ಕೆಲಸ ಮಾಡಿ ಸತ್ಯದ ಅರಿವಾಗಲು ಸಹಾಯ ಮಾಡುತ್ತಾ ಸಾಗುತ್ತದೆ... ಎಂತಹ ವಿಪರ್ಯಾಸ ಅಲ್ಲವೇ!!!

ಕಾಲ-ಅಜ್ಜಿ

ಬದುಕಿಹಳು
ಬಡಕಲ ದೇಹದ ಅಜ್ಜಿ
ಕಾಲ ಕರೆಯಲಿಲ್ಲ
ಎಂಬ ನೋವು ಆಕೆಗೆ
ಅಜ್ಜಿಗೆ ಇಲ್ಲ ತನ್ನವರು
ಇದ್ದರು ಇಲ್ಲದಂತಿಹಳು

ದಿನದೂಟಕ್ಕೆ ಅವರಿವರು
ನೀಡುವ ಅನ್ನವೇ ಮೃಷ್ಟಾನ್ನ
ಮನೆಯ ಹಾದಿಬದಿಯಲ್ಲಿ
ಹೋಗುವ ಮಕ್ಕಳೇ
ಈ ಅಜ್ಜಿಯ
ಮನಕ್ಕೆ ಚೈತನ್ಯ...

ಯಾರು ಯಾರಿಗೆ
ಅನಿವಾರ್ಯ ಗೊತ್ತಿಲ್ಲ
ಇವಳಿಗೆ ಬದುಕುವುದು
ಅನಿವಾರ್ಯ...
ಕಾಲ ಮಾತ್ರ ಕರೆಯಲಿಲ್ಲ
ಕಾಲದ ನಿರೀಕ್ಷೆಯಲ್ಲಿಹಳು
ಬಡಕಲ ದೇಹದ ಅಜ್ಜಿ...

ಅಂತಃಕರಣ

ಅಂತಃಕರಣ
ತುಂಬಿದ
ಆ ತಾಯಿ
ಧಾರಳ...

ಅಂತಃಕರಣ
ತುಂಬಿದ
ಆ ತಾಯಿ
ನೀಡಿದ ತಂಗಳನ್ನವು
ಮೃಷ್ಟಾನ್ನವಿದ್ದಂತೆ...

ಅಂತಃಕರಣ
ತುಂಬಿದ
ಆ ತಾಯಿ ಆಡಿದ
ಒಂದೊಂದು ಪ್ರೀತಿಯ
ನುಡಿಗಳು
ಮುತ್ತುಗಳಿದ್ದಂತೆ...

ಅಂತಃಕರಣ
ತುಂಬಿದ ಆ ತಾಯಿ
ತನಗಾಗಿ 
ಏನನ್ನೋ ಬಯಸಲಿಲ್ಲ
ಎಲ್ಲರಲ್ಲೂ
ಪ್ರೀತಿಯ ನುಡಿಗಳನ್ನ
ಬಯಸಿದಾಳಾ ತಾಯಿ...

ಪ್ರೀತಿ ತುಂಬಿದ
ಭಾವದಿಂದ
ಸತ್ಕಾರವಿಯ್ಯುವ
ಆ ತಾಯಂದಿರ ಇರುವಿಕೆಯೇ
ಸಂಸ್ಕಾರವೆಂಬ ಭಾವ
ಅಡಗಿಹುದು ಇನ್ನೂ ಇಲ್ಲಿ...!!!

ಅಭಿಮಾನ

ನಾ ಏನೂ
ಕೊಡದಿದ್ದರೂ
ನಿನ್ನ ಆಂತರ್ಯ
ನನ್ನ ಶ್ರೇಯಸ್ಸನ್ನೆ
ಬಯಸುತ್ತಿದ್ದರೇ
ಅದಕ್ಕಿಂತ
ಭಾಗ್ಯವುಂಟೇ..
ನಿನ್ನ ಆಂತರ್ಯದ
ನನ್ನ ಬಗೆಗಿನ
ಕಾಳಜಿಗೆ
ನಾ ಕೊಡುವಾ
ಕಾಣಿಕೆ
ನನ್ನ ನಮ್ರತೆಯೇ
ಹೊರತು
ಮತ್ತೇನಿದೆ ಹೇಳು...!?

ಸತ್ಯ-ಸುಳ್ಳು

ಸತ್ಯ ಕಹಿಯಾಗಿಹದು
ಸುಳ್ಳು ಸಿಹಿಯಾಗಿಹದು
ಸತ್ಯ ಮನಸ್ಸಿನ
ನಿರಾಳತೆಯೊಂದಿಗೆ
ಜೊತೆಗೂಡಿಹದು
ಸುಳ್ಳು ಮನಸ್ಸಿನ
ಮೂಲೆಯಲ್ಲಿ ನೆಲೆಸಿ
ಕೊರೆಯುವಿಕೆಯೊಂದಿಗೆ
ಜೊತೆಗೂಡಿಹದು
ಸುಳ್ಳಿನ ಪರಾಮವಧಿ
ನಮ್ಮ ಬದುಕಿಗೆ
ಧಕ್ಕೆ ತಂದಿಹದು
ಸತ್ಯದೊಂದಿಗಿನ
ಅಚಲವಾದ
ಜೊತೆಗೂಡುವಿಕೆ
ಕಲ್ಮಶವಿಲ್ಲದ
ಭಾವದೊಂದಿಗಿನ
ಮನಸ್ಸಿನ ಅರಿವಿಕೆಯೊಂದಿಗೆ
ಜೊತೆಗೂಡಿಹದು!!!

ತಾಯಿ ಮತ್ತು ಮಗು

ಬಾಲ್ಯದಲ್ಲಿ ಮಗುವಿನ ತಪ್ಪಿಗೆ ಕೊಡುವ ಪೆಟ್ಟು, ಯಾವುದೇ ಪರಿಣಾಮ ಬೀರುವುದಿಲ್ಲ. ಅದರ ಮನಸ್ಸು ತಪ್ಪು-ಸರಿ ವಿಚಾರ ಮಾಡುವ ಶಕ್ತಿ ಇನ್ನು ಬೆಳೆದಿರುವುದಿಲ್ಲ, ಆ ಕ್ಷಣ ಹೆತ್ತ ತಾಯಿ ಗದರಿಸಿದ್ದಕ್ಕೆ ಹೊಡೆದಿದ್ದಕ್ಕೆ, ಬೈಯಿದ್ದಕ್ಕೆ ಅಲ್ಲಿ ಜಾಗವೇ ಇರುವುದಿಲ್ಲ, ಅದನ್ನೆಲ್ಲ ಮರೆತು, ಮರುಕ್ಷಣವೇ ಮಗುವಿನ ಬಾಯಲ್ಲಿ ಬರುವ ತೊದಲು ನುಡಿಗಳು, ನೋವಿನಲ್ಲು ಸಹಜವಾದ ಕ್ರಿಯೆಯನ್ನು ವ್ಯಕ್ತಪಡಿಸಿ ಹೆತ್ತೊಡಲನ್ನು ಸೇರಿಬಿಡುತ್ತದೆ. ಮಗುವಿನ ಅಂತಃಕರಣ ಯಾವಾಗಲೂ ತಾಯಿಯನ್ನು ಬಯಸುತ್ತದೆ, ಮಗುವಿನಲ್ಲಿ ಮುಗ್ಧತೆ ಎದ್ದು ಕಾಣುತ್ತದೆ. ಅಂತಹ ನಿರ್ಮಲವಾದ ಮನಸ್ಸು, ನಿಷ್ಕಲ್ಮಶ ತುಂಬಿದ ಭಾವ, ಆ ಮನಸ್ಸು ಯಾವಾಗಲೂ ಹೆತ್ತೊಡಲನ್ನು ಬಯಸುತ್ತದೆ. ಅಂತಹ ಸ್ಥಿತಿಯಲ್ಲಿ ತಾಯಿಯಲ್ಲಿ ಬರುವ ಕಣ್ಣೀರು ಮನದಾಳದ ನೋವನ್ನು ಬದಿಗೊತ್ತಿಬಿಡುತ್ತದೆ...!!!

ಆಶಾದಿವಿಗೆ

ಮನದ
ಮೂಲೆಯಲ್ಲಿರುವ
ಅದೆಷ್ಟೋ
ಆಶಾದಿವಿಗೆಗಳ
ಕಂತೆ
ಒಂದೊಂದು
ಕಂತೆಯ
ಬಿಚ್ಚುತ್ತಾ
ಸಾಗುವ
ಕಾಲ
ಅಲ್ಲಿರುವ
ಒಂದೊಂದು
ಕೂಡ
ಬದುಕಿನ
ಏರಿಳಿತಗಳ
ಸರಮಾಲೆ...!!!???

ನೂರೆಂಟು

ನೂರೆಂಟು
ಭಾವಗಳು
ನೂರೆಂಟು
ಕನಸುಗಳು
ನೂರೆಂಟು
ಆಸೆಗಳು
ನೂರೆಂಟು
ಬಯಕೆಗಳು
ಎಲ್ಲವೂ
ಮುಗಿದಾಗ
ನೂರೆಂಟು
ಗೊಂದಲಗಳು..???

ಚೌಕಟ್ಟು

ಸೀಮಿತದಲ್ಲಿ
ಬಂಧಿತವಾಗಿಹ ಮನ
ಅದಬಿಟ್ಟು ಹೊರಬರುವ
ತವಕವಿಲ್ಲದ ಮನಕ್ಕೆ
ಪೇರಪಿಸುವ ಶಕ್ತಿಯು
ಕುಂದಿಹ ಭಾವ...
ಚೈತನ್ಯದರಿವಿನೋ
ಕೊರತೆಯೋ?
ಅದರಾಚೆಯ ಅರಿವಿನ
ಕುತೂಹಲವಿಲ್ಲದ
ಭಾವದ ಕೊರತೆಯೋ?
ತನ್ನರಿವೇ ಹೆಚ್ಚೆಂಬ ಅಹಂ
ಜಾಗೃತವಾಗಿದೆಯೋ?
ಅರಿಯದಾಗಿಹ ಮನಕ್ಕೆ
ಸೀಮಿತವನ್ನ
ಕಿತ್ತೊಗೆಯುವ
ಮನಸ್ಸು
ಏರ್ಪಡಬೇಕಾಗಿಹದಿಲ್ಲಿ..!!

ಸಂಗೀತ

ಆಲಿಸುವ ಮನಕ್ಕೆ
ಸೊಗಸಾದ
ಸಂಗೀತದ
ಹುಡುಕಾಟ
ಒಂದೊಂದು
ಸಂಗೀತದಲ್ಲಿ
ಮನಸ್ಸಿನ
ಹಲವು ಭಾವಗಳ
ಅನಾವರಣ
ಮನಸ್ಸಿನ
ಹಗುರತೆಯಲ್ಲಿ,
ತನ್ಮಯತೆಯಲ್ಲಿ
ನಿನ್ನ ಪಾಲೆ
ಹೆಚ್ಚಿಹುದು
ಓ ಮಾರ್ಧುಯಭರಿತ
ಸಂಗೀತವೇ
ನಿನ್ನಲ್ಲಿ ನನ್ನ
ಮನವು
ಒಂದಷ್ಟು ಕ್ಷಣ
ನಿರಾಳವಾದಂತೆ
ಭಾಸವಾಗಿಹುದು...!!!

ಕಲ್ಪನಾಲೋಕ

ಚಿತ್ರ ವಿಚಿತ್ರ
ಕಲ್ಪನೆಗಳು
ಒಂದಕ್ಕೊಂದು
ಸಂಬಂಧವಿಲ್ಲದೆ
ಎಲ್ಲವೂ
ಮನದಿಂದ
ಬಂದಿಹುದು
ಯಾವುದು
ಯಾಕಾಗಿ
ಎಂಬುದರಿವಿಲ್ಲ
ಬಂದವೆಲ್ಲವೂ
ಒಂದು ರೀತಿಯ
ಗೊಂದಲವೇ
ಇಷ್ಟೆಲ್ಲವೂ
ಎಲ್ಲಿತ್ತೋ
ಒಂದು ಗೊತ್ತಿಲ್ಲ
ಆದರೆ, ಬರುವುದು
ಮಾತ್ರ ಇನ್ನು
ನಿಂತಿಲ್ಲ..!!!

ಮೋಡ

ನವ ನವೀನಾ
ಚಿತ್ತಾರಗಳು
ಕಲೆಗಾರನ
ಕೈಚಳಕವಿಲ್ಲ
ಎಲ್ಲಿಯೂ ಬಣ್ಣದ
ಲೇಪವಿಲ್ಲ
ಚಿತ್ತಾರ ಸೃಷಿಗೆ
ಕಾಗದದ
ಅಗತ್ಯವಿಲ್ಲ
ಎಲ್ಲ ಕಡೆಯ
ಬಗೆ ಬಗೆಯ
ಚಿತ್ತಾರಗಳ
ಅನಾವರಣ
ಕ್ಷಣಕ್ಕೊಂದು
ನೋಟದ ಸೃಷ್ಟಿ
ಓ ಮೋಡವೇ
ನೀ ನೀಲಾಕಶದಲ್ಲಿ
ಅದೆಷ್ಟೋ
ಬಗೆ ಬಗೆಯ
ನೋಟವನ್ನ
ಸೃಷ್ಟಿಸಿಬಿಟ್ಟೆ...!!!

ಹಸಿವು

ಹಸಿವೇ ನೀನೆಷ್ಟು
ಘೋರ
ನಿನ್ನ ದಾಹ
ತಣಿಸಲು ಏನೆಲ್ಲ
ಮಾಡಬೇಕಾಗಿಹುದು
ದುಡಿಯುವ ಶಕ್ತಿ
ಕರುಣಿಸಿದ
ಕೈಗಳನೋ
ಹಸಿವು
ತಣ್ಣಿಸಿಕೊಳ್ಳವವು
ಶಕ್ತಿ ಕುಂದಿ
ಹೊರದೂಡಲ್ಪಟ್ಟ
ಹಿರಿ ಜೀವಗಳ
ಹಸಿವು ತಣ್ಣಿಸುವ
ಪರಿಯ ಕಂಡ
ಮನ ನೊಂದಿಹುದು
ಓ ದೇವರೆ
ನೀ ಸೃಷ್ಟಿಸಿದ
ಹಿರಿಯ ಚೇತನಗಳ
ಮೇಲೆ ಏಕಿಷ್ಟು ಕೋಪ
ಯಾಕೀ ಭಿನ್ನತೆಯೋ
ಹಸಿವಿನಿಂದ
ಕಂಗ್ಗೆಟ್ಟ ಜೀವ
ನಿನ್ನ ನೆನೆ ನೆನೆದು
ಮುಕ್ತಿ ಪಡೆಯಲೆಂಬ
ಬಯಕೆಯೇ
ಅರಿಯದಾಯಿತು
ಮನ....!!!

Saturday, 11 August 2012

ಒಲವು

ಯಾವುದು ನಮ್ಮವಲ್ಲ
ಎಲ್ಲವೂ ಇಲ್ಲೇ
ಬಿಟ್ಟುಹೋಗುವ
ಸ್ಥಿತಿಯಲ್ಲಿರುವ
ಐಹಿಕ ಮೋಹಗಳತ್ತ
ಯಾಕೀ ಅತೀಯಾದ
ಒಲವೋ ನಾ ಕಾಣೆ
ನಮ್ಮ ಜೊತೆ
ಬರುವುದರ
ಮೇಲಿರಲಿಲ್ಲವಲ್ಲ
ಒಂದಿಷ್ಟು ಕಾಳಜಿ
ಇದ್ದಿದ್ದರೇ ಅದೆಷ್ಟೋ
ಮುಗಿಲೆತ್ತರಕ್ಕೆ
ಏರುತ್ತಿತ್ತು ಮನ...!!!

ಕಟುಸತ್ಯ

ಕಟುಸತ್ಯ
ಅರಗಿಸಿಕೊಳ್ಳದ
ಮನ
ಸುಲಭವಾದ
ಸಿಹಿಯೆನಿಸಿದ
ದಾರಿ ಹೆಚ್ಚು
ಹಿತವೆನಿಸುತ್ತಾ
ಸಾಗುವುದು
ಶ್ರಮವಿಲ್ಲದ
ದಾರಿ ಸಾಗಿ
ಕಳೆದ ದಿನಗಳ
ತಿರುಗಿ ನೋಡಿದ
ಮನಕ್ಕೆ,
ಒಳಿತು-ಕೆಡುಕುಗಳ
ಲೆಕ್ಕಚಾರದಲ್ಲಿ
ಕೆಡುಕುಗಳು
ರಾರಾಜಿಸಿ
ಅಣುಕಿಸುತಿಹುದು..!!!

ದೃಷ್ಟಿ

ಇಂದು
ನಿನ್ನೆಯದಲ್ಲ
ನಿನ್ನ ಬಾಂಧವ್ಯ
ಹುಟ್ಟಿನಿಂದ
ಜೊತೆಯಲ್ಲಿರುವೆ
ನೀ ನೆಟ್ಟ
ಕಡೆಯಲೆಲ್ಲ
ನಾ ಮನಸ್ಸ
ಹಾಯಿಸಿರುವೆ
ನೀ ಸವಿದ
ಸವಿಯ ನನಗೂ
ಉಣ್ಣಬಡಿಸಿರುವೆ
ಓ ದೃಷ್ಟಿಯೇ
ನಿನ್ನ ನೋಡುತ್ತಾ
ನನ್ನ ಒಳ
ದೃಷ್ಟಿಯನ್ನೆ
ಮರೆತಿರುವೆ...!!!

ವ್ಯಾಮೋಹ

ಸಾವು ಅನಿರೀಕ್ಷಿತ
ಎನ್ನುವವರು
ಹಲ ಮಂದಿ
ಸಾವು ಅನಿರೀಕ್ಷಿತವೋ
ನಿರೀಕ್ಷಿತವೋ
ಒಂದು ಅರಿಯದ
ದೇಹ ಕೊನೆಯಲ್ಲಿ
ಲೀನವಾಗುವುದು
ಮಾತ್ರ ಸೃಷ್ಟಿಯಲ್ಲಿ
ಕೃಷವಾದ ದೇಹ
ಸಾವಿನ ಕೊನೆಯ
ದಿನಗಳ ಬಿಡುಗಡೆಗಾಗಿ
ಆತ್ಮದೊಂದಿಗಿನ ಬಾಂಧ್ಯವ
ಕಡಿದುಕೊಳ್ಳಲು ಅಣಿಯಂತೆ
ಸಜ್ಜುಗೊಂಡಂತಿಹದು
ಸೃಷ್ಟಿಯಲ್ಲಿ
ಲೀನವಾಗುವ ದೇಹದ
ಮೇಲಿನ ವ್ಯಾಮೋಹ
ಆತ್ಮಕ್ಕೆ ಯಾಕಾಗಿ?
ಜಿಜ್ಞಾಸೆಯೆಂಬ
ಭಾವವೆರ್ಪಟಿಹದು
ಅದರೊಟ್ಟಿಗೆ ಕಳೆದ
ಅನಿರೀಕ್ಷಿತ
ಫಲಾಫಲಗಳ
ಸಂಬಂಧವೆಂಬ
ಭಾವವೋ
ಏನೋ ಅರಿಯದಾಯಿತು
ಮನ....!!!

ಅನಾವರಣ

ಎಲ್ಲೊ ಹುಟ್ಟುವುದಿಲ್ಲ
ಹುಟ್ಟುವುದು ಮನಸ್ಸಿನಲ್ಲಿ

ಹುಟ್ಟಿದೆಲ್ಲಕ್ಕೂ 
ಅರ್ಥವಿರುವುದಿಲ್ಲ
ಅರ್ಥವಿರುವುದಕ್ಕೆಲ್ಲ 
ಭಾವನೆಗಳಿರುವುದಿಲ್ಲ

ಭಾವನೆಗಳಿರುವುದೆಲ್ಲ
ಒಳ್ಳೆಯದಾಗಿರುವುದಿಲ್ಲ
ಆಯ್ಕೆಯಲ್ಲಿರಬೇಕು
ಸರಿ-ತಪ್ಪುಗಳ ಲೆಕ್ಕಚಾರ

ಯೋಚಿಸುವ ಶಕ್ತಿಯಿರುವ
ಮನಸ್ಸಿಗೆ ತನ್ನೊಳಗಿರುವ
ಒಳಿತುಗಳ ಅನಾವರಣಕ್ಕೆ
ಮನ ಪುಷ್ಠಿ
ನೀಡಬೇಕಾಗಿಹುದು...!!!

ಮೌಲ್ಯಯುತ ಬದುಕು

ವೇಷ ಭೂಷಣ
ತೋಡಿಗೆಯಲ್ಲಿ
ಇಲ್ಲದಿಹುದು
ವೈಯುಕ್ತಿಕ ನಿಲುವು

ಹಣ-ಐಶ್ವರ್ಯ
ಇರುವ ಕಡೆ
ಅಡಗಿಲ್ಲದಿಹುದು
ಮಾನವಿಯತೆ

ತೋರ್ಪಡಿಕೆಯ
ಜೀವನಕ್ಕಂಟಿಕೊಂಡಿರುವ
ಕಡೆ ಇಲ್ಲದಿಹುದು
ಮೌಲ್ಯಯುತ ಬದುಕು

ಇಲ್ಲದಿಹ ಕಡೆ
ಮೌಲ್ಯಯುತ ಬದುಕ
ಹುಡುಕಿದರೇ
ಸಿಗುವುದೇ?

ತೋರಿಕೆಯ
ಪ್ರಪಂಚದರಿವಿಲ್ಲದೆ
ನೈಜತೆಯ
ಬದುಕ ಸವೆಸವವರಡೆ
ಒಮ್ಮೆ ಕಣ್ಣಾಯಿಸಿದಾಗ
ಎಲ್ಲವೂ ಅಲ್ಲಡಗಿಹುದು...!!!

ಹಗಲುಗನಸು

ಒಂದಷ್ಟು ಹೊತ್ತು
ತಂದಿರುವೆ
ಹಗಲುಗನಸ್ಸನ್ನ
ಅದರಲ್ಲಿ
ಸವಿಗನಸನ್ನ
ಆಯ್ದುಕೊಂಡಿರುವೆ
ನಾ... ಸ್ವಾರ್ಥಿಯಾಗಲಾರೆ
ನೀ... ದ್ವೇಷಿಯಾಗಬೇಡ
ಆಯ್ದುಕೊಂಡ ಕೆಲ
ಸವಿಗನಸು
ಸಾಕಾರಗೊಳ್ಳಲು
ನಿನ್ನ ಸಹಕಾರ
ಕೋರಿರುವೆ
ಅದ ಕರುಣಿಸೋ
ಕಾಯಕವ ನೀ
ಹೊತ್ತಿರುವೆ
ನೀ ಕರುಣಿಸಿದರೇ
ಮತ್ತೆ ಮತ್ತೆ
ಹಗಲುಗನಸ ಕಾಣಲು
ಸಹಕಾರಿಯಾಗಿರುವೆ...!!!

ಭಿನ್ನತೆ

ಸೃಷ್ಟಿಯ
ಸೃಷ್ಟಿಸಿ
ಬಟ್ಟ
ಬಯಲಾಗಿಟ್ಟಿರುವೆ

ನೋಡುವ
ಕಣ್ಣಗಳಿಗೆ
ಹಲ ಭಾವ
ತುಂಬಿರುವೆ

ಭಾವದರಿವ
ಅವರವರ
ಮನಸ್ಸಿಗೆ
ಬಿಟ್ಟಿರುವೆ

ಒಂದು
ಮನಸ್ಸಿನಂತೆ
ಮತ್ತೊಂದರ
ಮನಸ್ಸಿನ
ಕಲ್ಪನೆಗಳು
ಭಿನ್ನವಾಗಿಹದಿಲ್ಲಿ

ಕಲ್ಪಿಸಿಕೊಳ್ಳುವ
ಮನಸ್ಸು
ನೋಡುವ
ಮನಸ್ಸು
ಎಲ್ಲವೂ ಭಿನ್ನ ಭಿನ್ನ

ಅದಕ್ಕೆ
ಸೃಷ್ಟಿಯಲ್ಲಿ
ಹೊಂದಾಣಿಕೆ
ಭಾವ
ಕೊರತೆಯಾದಂತೆ
ಭಾಸವಾಗಿಹುದು!!!

ಅಂದು-ಇಂದು

ಮಣ್ಣಲ್ಲಿ ಹುಟ್ಟಿ
ಮಣ್ಣಲ್ಲಿ ಒಂದಾಗುವ
ದೇಹದೊಂದಿಗಿನ ನಂಟು
ಆಯ್ದುಕೊಂಡ
ಮಾರ್ಗ ಹಲವು

ಸಾರ್ಥಕತೆಯ
ಹಾದಿ ಹುಡುಕಿದ
ಮಹಾತ್ಮರು
ಮಣ್ಣಿಗಾಗಿ
ತನು-ಮನ
ಧನವನ್ನೆಲ್ಲಾ
ಅರ್ಪಿಸಿದರವರು
ಅಂದು

ಆ ಅರ್ಪಣೆಯೇ
ಭಾವವೇ
ನೆಲ, ಜಲ
ನೈಸರ್ಗಿಕ
ಸಂಪತ್ತು ಎಲ್ಲವೂ
ಸವಿಯುತ್ತಿರುವ
ಜೊತೆ ಜೊತೆಯಲ್ಲಿಯೇ
ಸ್ವಾತಂತ್ರ್ಯ
ಪರಿಧಿಯೊಳಗೆ
ಬೆಚ್ಚಗಿರುವೆವು
ಇಂದು

ಬೆಚ್ಚನೆಯ
ಸವಿಯ
ಸವಿಯುತ್ತಾ
ಇಂದು
ಪ್ರಕೃತಿಯ
ಮಡಿಲಿಗೆ
ಆಧುನಿಕತೆಯೆಂಬ
ಸೋಗಿನಲ್ಲಿ
ಬೆಂಕಿಯಿಡುತಿಹೆವು

ಸ್ವಾತಂತ್ರ್ಯದ
ಪರಿಧಿಯೊಳಗಿರಬೇಕಾದ
ಮನಸ್ಸು
ಅದ ಮೀರಿ
ತನ್ನ ಸ್ವಾರ್ಥದ
ಪರಿಧಿಯೊಳಗೆ
ಬಂಧಿಯಾಗಿ
ಪ್ರಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು

ನೈಜತೆಯ
ಭಾವವಿಲ್ಲದ
ಮನಸ್ಸು
ತೋರಿಕೆಯ
ಮೋಹಕ್ಕೆ
ಒಳಗಾಗಿ
ಸಂಸ್ಕೃತಿಯ
ಅಳಿವಿನತ್ತ
ಕೊಂಡೊಯ್ಯುತಿವೆವು

ನೈತಿಕತೆಯಿಲ್ಲದ
ಸ್ವಾತಂತ್ರ್ಯವೆಂಬುದಿಲ್ಲಿ
ವಿಶಾಲವಾಗಿ
ಹೆಮ್ಮರವಾಗಿ
ಬೆಳದು
ಬುನಾದಿಯನ್ನೇ
ಅಲುಗಾಡಿಸುತಿಹದು
ಇಂದು...

Friday, 10 August 2012

ದಾನ

ನೀಡುವ
ಮನಸ್ಸಿರಬೇಕು
ಎನ್ನುವವರು
ಕೆಲ ಮಂದಿ

ಎಲ್ಲವೂ
ನೀಡುವ
ದೇವರು
ನಾವು ಕೊಡಲು
ಉಳಿಸಿರುವುದೇನು

ಅರಿಯದಾಯಿತು
ನಾ ಕೊಟ್ಟೆ
ನನ್ನಿಂದ
ನಿಮ್ಮಿಂದ
ಎನ್ನುವ
ಹಲ ಮಂದಿ

ನೀಡುವುದನ್ನ
ಎಲ್ಲಿಂದ
ತಂದರೋ
ಒಂದು
ಅರಿಯದಾದರು...!!!